ಜುಬೇರ ಖಾನ ಎಂಬ ವ್ಯಕ್ತಿಯಿಂದ ಶ್ರೀರಾಮ ಮಂದಿರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್‌ ನಿಂದ ಸ್ಫೋಟಿಸುವುದಾಗಿ ಬೆದರಿಕೆ !

ಪೊಲೀಸರಿಂದ ತನಿಖೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಶ್ರೀರಾಮ ಮಂದಿರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಹೆಚ್ಚುವರಿ ಪೊಲೀಸ್ ವಿಶೇಷ ಕಾರ್ಯಪಡೆಯ ಹೆಚ್ಚುವರಿ ಮಹಾನಿರ್ದೇಶಕ ಅಮಿತಾಬ್ ಯಶ್ ಅವರನ್ನು ಸ್ಫೋಟಿಸುವುದಾಗಿ ಜುಬೇರ್ ಖಾನ್ ಎಂಬ ವ್ಯಕ್ತಿ ಇ-ಮೇಲ್ ಕಳುಹಿಸಿದ್ದಾನೆ.

ಈ ಇ-ಮೇಲ್ ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಬಂದಿದೆ. ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ತನಗೆ ನಂಟಿದೆ ಎಂದು ಜುಬೇರ ಖಾನ್ ಹೇಳಿದ್ದಾನೆ. ಈ ಇಮೇಲ್ ಅನ್ನು ನಿಖರವಾಗಿ ಎಲ್ಲಿಂದ ಕಳುಹಿಸಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.