ಶ್ರೀರಾಮಮಂದಿರ ಉದ್ಘಾಟನೆಗೆ ರಾಜ್ ಠಾಕ್ರೆ ಇವರಿಗೆ ಆಹ್ವಾನ ಬರದಿದ್ದರೂ ಬರಲೇಬೇಕು ! – ಹನುಮಾನ್ ಗಢಿಯ ಮಹಂತ್ ರಾಜು ದಾಸ್

(ಮಹಂತ್ ಎಂದರೆ ಮಠ ಅಥವಾ ದೇವಾಲಯದ ಮುಖ್ಯಸ್ಥ)

ಹನುಮಾನ್ ಗಢಿಯ ಮಹಂತ್ ರಾಜು ದಾಸ್ ಇವರಿಂದ ಮನವಿ !

(ಎಡದಿಂದ )ಮಹಂತ್ ರಾಜು ದಾಸ್ ಮತ್ತು ರಾಜ್ ಠಾಕ್ರೆ

ಅಯೋಧ್ಯೆ (ಉತ್ತರ ಪ್ರದೇಶ) – ರಾಜ್ ಠಾಕ್ರೆ ಒಬ್ಬ ಹಿಂದೂ ಹುಲಿಯಾಗಿದ್ದಾರೆ. ಅವರನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಖಂಡಿತ ಆಹ್ವಾನ ಸಿಗುತ್ತದೆ. ಒಂದು ವೇಳೆ ಆಮಂತ್ರಣ ಸಿಗದಿದ್ದರೆ ಅಯೋಧ್ಯೆಗೆ ಖಂಡಿತ ಬನ್ನಿ ಎಂದು ಈಗಲೂ ಮನವಿ ಮಾಡುತ್ತೇನೆ. ಅಯೋಧ್ಯೆಯ ಹನುಮಾನ್ ಗಢಿಯ ಮಹಂತ್ ರಾಜು ದಾಸ್ ಅವರು ಸನಾತನಿ ಹುಲಿ ಎಂದು ಹೇಳಿದ್ದಾರೆ. ಅವರು ಮರಾಠಿ ಸುದ್ದಿ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದರು.

ಇದಕ್ಕೂ ಮುನ್ನ ಮಹಂತ ರಾಜು ದಾಸ್ ಇವರು, ಮುಂಬಯಿನವರು ಅಯೋಧ್ಯೆಗೆ ಬಂದು ಶ್ರೀರಾಮ ಮಂದಿರ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಬಾಳಾಸಾಹೇಬ್ ಠಾಕ್ರೆ ಇವರು, ‘ಬಾಬ್ರಿಯನ್ನು ನನ್ನ ಜನರು ಕೆಡವಿದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದರು. ಇಂತಹ ನಾಯಕ ಮತ್ತೆ ಬರುವುದಿಲ್ಲ, ಎಂದು ಹೇಳಿದರು.