ಮಂಗಳೂರಿನ ಬಾಂಬ್ ಸ್ಫೋಟದ ಹಿಂದೆ ಇಸ್ಲಾಮಿಕ್ ಸ್ಟೇಟ್ ಕೈವಾಡ ! – ರಾಷ್ಟ್ರೀಯ ತನಿಖಾ ದಳದ ಆರೋಪಪಟ್ಟಿಯಲ್ಲಿ ಉಲ್ಲೇಖ

ಜಿಹಾದಿ ಮುಸ್ಲಿಂ ಆರೋಪಿಗಳ ಮನೆಯಲ್ಲಿ ಕಾಂಗ್ರೆಸ್ ಕಚೇರಿ !

ಜಿಹಾದಿಗಳಿಂದ ಹಿಂದೂ ಹೆಸರಿನ ಆಧಾರ್ ಕಾರ್ಡ್ !

ಮಂಗಳೂರು – ನವೆಂಬರ್ 29, 2022 ರಂದು ಮಂಗಳೂರಿನಲ್ಲಿ ರಿಕ್ಷಾದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಕೈವಾಡವಾಗಿರುವುದು ಬಹಿರಂಗವಾಗಿದೆ. ಸ್ಫೋಟ ನಡೆಸಲು ಜಿಹಾದಿ ಭಯೋತ್ಪಾದಕರು ಹಿಂದೂಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿಯನ್ನು ತಯಾರಿಸಿರುವುದು ಕೂಡ ಬೆಳಕಿಗೆ ಬಂದಿದೆ. ಸ್ಫೋಟದಲ್ಲಿ ರಿಕ್ಷಾ ಚಾಲಕ ಪುರುಷೋತ್ತಮ್ ಮತ್ತು ಮೊಹಮ್ಮದ್ ಶಾರಿಕ್ ಗಾಯಗೊಂಡಿದ್ದಾರೆ. ಇದರಲ್ಲಿ ಶಾರಿಕ್ ಆರೋಪಿಯಾಗಿದ್ದಾನೆ. ಅವನ ಕುಟುಂಬದವರು ಬಾಡಿಗೆಗೆ ಪಡೆದ ಮನೆಯಲ್ಲಿ ಕಾಂಗ್ರೆಸ್ ಕಚೇರಿ ನಡೆಸುತ್ತಿರುವುದು ಕೂಡ ಬಹಿರಂಗವಾಗಿದೆ.

1. ಮೊಹಮ್ಮದ್ ಶಾರಿಕ್ ‘ಪ್ರೆಶರ್ ಕುಕ್ಕರ್ ಬಾಂಬ್’ನೊಂದಿಗೆ ಪ್ರಯಾಣಿಸುತ್ತಿದ್ದ. ಅವನಿಗೆ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಬಾಂಬ್ ಸ್ಪೋಟಿಸಿ ಹಿಂದೂಗಳನ್ನು ಹೆದಿರಿಸುವುದಿತ್ತು; ಆದರೆ ದಾರಿಯಲ್ಲಿ ‘ಪ್ರೆಶರ್ ಕುಕ್ಕರ್ ಬಾಂಬ್’ ಸ್ಫೋಟಗೊಂಡಿದೆ. ಶಾರಿಕ್ ‘ಪ್ರೇಮ್‌ರಾಜ್’ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್‌ನೊಂದಿಗೆ ಪ್ರಯಾಣಿಸುತ್ತಿದ್ದ.

2. ಈ ಘಟನೆಯ ನಂತರ ಶಾರಿಕ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದ್ದರಿಂದ ಕಾಂಗ್ರೆಸ್ ನಾಯಕ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ರಾಷ್ಟ್ರೀಯ ತನಿಖಾ ದಳ ಈತನ ವಿರುದ್ಧ ಸಾಕ್ಷ್ಯ ಸಂಗ್ರಹಿಸಿದಾಗ ಆತ ಭಯೋತ್ಪಾದಕ ಎಂಬುದು ಬೆಳಕಿಗೆ ಬಂದಿತ್ತು.

ಸಂಪಾದಕರ ನಿಲುವು

* ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಬಗ್ಗೆ ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಜಿಹಾದಿ ಭಯೋತ್ಪಾದಕರ ಮನೆಯಲ್ಲಿ ತಮ್ಮದೇ ಪಕ್ಷದ ಕಚೇರಿ ನಡೆಸುವುದು ತಪ್ಪು ಅನಿಸುವುದಿಲ್ಲ, ಇದರಿಂದ ಅವರ ಮನಸ್ಥಿತಿ ಹೇಗಿದೆ ? ಎಂಬುದು ಗಮನಕ್ಕೆ ಬರುತ್ತದೆ !