ಸಾಕ್ಷ್ಯಾಧಾರಗಳ ಕೊರತೆಯಿಂದ ಮುಸ್ಲಿಂ ಯುವಕನ ಖುಲಾಸೆ

ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ ಪ್ರಕರಣ

ಸೂರತ್ (ಗುಜರಾತ್) – ಹಿಂದೂ ಹೆಸರು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಅವಳೊಂದಿಗೆ ವಿವಾಹವಾದ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯವು ಮೊಹಮ್ಮದ್ ಅಖ್ತರ್ ಶೇಖ್ ಯುವಕನ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರಪರಾಧಿ ಎಂದು ಖುಲಾಸೆ ಗೊಳಿಸಿದೆ. ಶೇಖ್ ತನ್ನ ಹೆಸರನ್ನು ಮುಕೇಶ್ ಗುಪ್ತಾ ಎಂದು ಹೇಳಿದ್ದನು. ಮದುವೆ ಬಳಿಕ ಸಂತ್ರಸ್ತ ಯುವತಿಯನ್ನು ಮತಾಂತರ ಮಾಡಲು ಯತ್ನಿಸಿದ್ದ. ಈ ಪ್ರಕರಣದಲ್ಲಿ 2021ರಲ್ಲಿ ಅವನನ್ನು ಬಂಧಿಸಲಾಗಿತ್ತು. ಶೇಖ್ ಮದುವೆಯಾಗಿದ್ದರೂ ಈ ಯುವತಿಯನ್ನು ಮದುವೆಯಾಗಿದ್ದ.