Karnataka Hijab Ban : ಸಿದ್ದರಾಮಯ್ಯ ಒಂದು ಜಾತಿಯ ಮುಖ್ಯಮಂತ್ರಿ ಅಲ್ಲ, ಇಡೀ ರಾಜ್ಯದ ಮುಖ್ಯಮಂತ್ರಿ ! – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಹಿಜಾಬ್ ನಿಷೇಧ ಹಿಂಪಡೆಯುವ ಹೇಳಿಕೆ ಕುರಿತು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇವರ ಟೀಕೆ !

ಬೆಳಗಾವಿ – ಸಿದ್ದರಾಮಯ್ಯ ಯಾವುದೇ ಜಾತಿ-ಪಂಗಡದ ಮುಖ್ಯಮಂತ್ರಿ ಅಲ್ಲ, ಇಡೀ ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಇವರು ಟೀಕಿಸಿದ್ದಾರೆ. ಹಿಜಾಬ್ ನಿಷೇಧ ಹಿಂಪಡೆಯುವ ಕುರಿತು ಮುಖ್ಯಮಂತ್ರಿಗಳ ಹೇಳಿಕೆಗೆ ಸ್ವಾಮೀಜಿ ಮೇಲಿನ ಟೀಕೆ ಮಾಡಿದರು.

ಸ್ವಾಮಿಜಿ ತಮ್ಮ ಮಾನತನ್ನು ಮುಂದುವರೆಸಿ, ಇದು ಸಮಾಜದ ಒಂದು ವರ್ಗವನ್ನು ಗುರಿಯಾಗಿಸುತ್ತಿದೆ ಮತ್ತು ಇದು ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಅನ್ಯಾಯ ಎಂದು ಹೇಳಿದರು. ಒಬ್ಬರಿಗೆ ಒಂದು ಕಾನೂನು ಮತ್ತೊಬ್ಬರಿಗೆ ಇನ್ನೊಂದು ಕಾನೂನು ಸರಿಯಲ್ಲ. ಇಂತಹ ವರ್ತನೆ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತದೆ. ಕೆಲ ದಿನಗಳ ಹಿಂದೆ ‘ಹಿಂದೂ ಮಹಿಳೆಯರು ಪರೀಕ್ಷೆಗೆ ಹೋಗುವಾಗ ಕಾಲುಂಗುರ, ಮಂಗಳಸೂತ್ರ ತೆಗೆಯಬೇಕು’ ಎಂಬ ಆದೇಶ ಬಂದಿತ್ತು. ಒಂದೆಡೆ ಹೀಗೆ ನಡೆಯುತ್ತಿರುವಾಗ ‘ಕೆಲವರು ಬುರ್ಖಾ ಹಾಕಿಕೊಳ್ಳಬಹುದು’ ಎಂದು ಹೇಳಿದರು. ಮುಖ್ಯಮಂತ್ರಿಗಳು ಈ ರೀತಿ ಆಡಳಿತ ನಡೆಸಬಾರದು ಎಂದು ಹೇಳಿದರು.