ಆಗ್ರಾ (ಉತ್ತರ ಪ್ರದೇಶ)ದಲ್ಲಿ ಜೈನ ಮುನಿ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದ ಆಸಿಫ್ ನ ಬಂಧನ !

ಮತಾಂಧರ ಉದ್ಧಟತನವನ್ನು ಗಮನಿಸಿ !

ಜೈನ ಮುನಿ ಸುಧಾ ಸಾಗರ

ಆಗ್ರಾ (ಉತ್ತರ ಪ್ರದೇಶ) – ಜಿಲ್ಲೆಯ ರಕಾಬಗಂಜ ನಗರದಲ್ಲಿ ಆಸಿಫ ಹೆಸರಿನ ಯುವಕನು ಜೈನ ಮುನಿ ಸುಧಾ ಸಾಗರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದನು. ಈ ಸಮಯದಲ್ಲಿ ಅಲ್ಲಿದ್ದ ಜೈನ ಸಮಾಜದ ಜನರು ಅವನನ್ನು ತಡೆಯಲು ಪ್ರಯತ್ನಿಸಿದರು. ಅವನು ಆ ಜನರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದನು. ತದನಂತರ ಅವನು ಘಟನಾ ಸ್ಥಳದಿಂದ ಓಡಿ ಹೋದನು. ಆಕ್ರೋಶಗೊಂಡ ಜನರು ಪೊಲೀಸರಿಗೆ ದೂರು ನೀಡಿ, ಆಸಿಫ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ ಆಸಿಫನನ್ನು ಬಂಧಿಸಿದರು.