ತೇಲಂಗಾಣದಲ್ಲಿ ವಾಯುಸೇನೆಯ ವಿಮಾನ ಪತನ, 2 ವೈಮಾನಿಕರ ದುರ್ಮರಣ

ವಾಯುಸೇನೆಯ ವಿಮಾನಗಳು ಎಂದರೆ ಹಾರಾಡುವ ಶವಪೆಟ್ಟಿಗೆಗಳು !

ಭಾಗ್ಯನಗರ (ತೇಲಂಗಾಣ) – ತೇಲಂಗಾಣದ ದಿಂಡಿಗುಲ್‌ನಲ್ಲಿ ಇಂದು ಬೆಳಿಗ್ಗೆ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡು ಪ್ರಶಿಕ್ಷಕ ವೈಮಾನಿಕ ಮತ್ತು ಕಲಿಯುತ್ತಿದ್ದ ವೈಮಾನಿಕ ಸಾವನ್ನಪ್ಪಿದ್ದಾರೆ. ವಿಮಾನ ಪತನವಾದ ಕೂಡಲೇ ಅದಕ್ಕೆ ಬೆಂಕಿ ಹತ್ತಿಕೊಂಡಿತು ಮತ್ತು ಅದು ಸಂಪೂರ್ಣವಾಗಿ ಸುಟ್ಟು ಕರಕಲಾಯಿತು. ಇದು ಕಳೆದ 8 ತಿಂಗಳಲ್ಲಿ ಅಪಘಾತವಾಗಿರುವ ವಾಯುಪಡೆಯ ಮೂರನೇ ವಿಮಾನವಾಗಿದೆ. ಈ ಹಿಂದೆ ಜೂನ್‌ ತಿಂಗಳಿನಲ್ಲಿ ತರಬೇತಿ ವಿಮಾನ ‘ಕಿರಣ್’ ಅಪಘಾತಕ್ಕೀಡಾಗಿತ್ತು. ಮೇ ತಿಂಗಳಿನಲ್ಲಿ `ಮಿಗ್- 21’ ವಿಮಾನ ಪತನಗೊಂಡು 3 ವೈಮಾನಿಕರು ಸಾವನ್ನಪ್ಪಿದ್ದರು.