|

ನವ ದೆಹಲಿ – ರಾಜಸ್ಥಾನ, ಮಿಜೋರಾಮ, ಮಧ್ಯ ಪ್ರದೇಶ, ಛತ್ತಿಸ್ಗಢ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಖ್ಯೆ ಈ ರಾಜ್ಯಗಳಲ್ಲಿನ ೨೦೧೮ ರ ವಿಧಾನಸಭೆಯ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಹಣಕ್ಕಿಂತಲೂ ೭ ಪಟ್ಟು ಹೆಚ್ಚಾಗಿದೆ. ಕಳೆದ ಸಾರಿ ೨೩೯ ಕೋಟಿ ೧೫ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು. ಈಗ ವಶಪಡಿಸಿಕೊಳ್ಳಲಾಗಿರುವ ವಸ್ತುಗಳು ಮತ್ತು ಹಣ ಮತದಾರರನ್ನು ಆಕರ್ಷಿಸಲು ಹಂಚಲಾಗುತ್ತಿತ್ತು. ಚುನಾವಣಾ ಆಯೋಗದಿಂದ ಚುನಾವಣೆಯ ಘೋಷಣೆ ಮಾಡಿದನಂತರ ಎಂದರೆ ಅಕ್ಟೋಬರ್ ೯ ರಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಆರಂಭವಾಗಿತ್ತು. ಎಂದು ಹೇಳಿದೆ.
ಚುನಾವಣಾ ಆಯೋಗದ ಹೇಳಿಕೆಯ ಪ್ರಕಾರ, ಈ ಹಿಂದೆ ನಡೆದಿರುವ ೬ ರಾಜ್ಯಗಳ ಚುನಾವಣೆಯಲ್ಲಿ (ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರ, ಗುಜರಾತ ಮತ್ತು ಕರ್ನಾಟಕ) ೧ ಸಾವಿರದ ೪೦೦ ಕೋಟಿ ರೂಪಾಯ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಈ ರಾಜ್ಯಗಳಲ್ಲಿ ಕಳೆದ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಹಣದಲ್ಲಿ ೧೧ ಪಟ್ಟು ಹೆಚ್ಚಳವಾಗಿದೆ.
| ಸಂಪಾದಕೀಯ ನಿಲುವು
ಮತದಾರರಿಗೆ ಸಾರಾಯಿ, ಹಣ ಮುಂತಾದವು ಹಂಚಲಾಗುತ್ತದೆ, ಇದು ಪ್ರತಿಯೊಬ್ಬರಿಗೂ ತಿಳಿದಿದೆ. ಇದರಲ್ಲಿ ಹೊಸದೆನಿಲ್ಲ. ಜಗತ್ತಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ಇರುವ ಭಾರತದಲ್ಲಿ ಹೀಗೆ ವರ್ಷಗಳಿಂದ ನಡೆಯುತ್ತಿದೆ, ಇದು ಭಾರತೀಯರಿಗೆ ಲಜ್ಜಾಸ್ಪದ ! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!