ಹಂಪಿ ದೇವಸ್ಥಾನಕ್ಕೆ ಮೊಳೆ ಹೊಡದ ಘಟನೆ, ಧಾರ್ಮಿಕ ದತ್ತಿ ಇಲಾಖೆಯಿಂದ ಕ್ರಮ

ಮೊಳೆ ಹೊಡೆದ ಗುಮಾಸ್ತ ಅಮಾನತು

ವಿಜಯನಗರ – ಐತಿಹಾಸಿಕ ಸ್ಮಾರಕ ಎಂದಾಕ್ಷಣ ಹಂಪಿಯಲ್ಲಿನ ಒಂದೊಂದು ಸ್ಮಾರಕಗಳು, ಕಲ್ಲಿನ ಕಂಬ, ದೇವಾಲಯಗಳು ಅಲ್ಲಿನ ಕೆತ್ತನೆಗಳು ಕಣ್ಮುಂದೆ ಬರುತ್ತವೆ. ಪುರಾತನ ಸ್ಮಾರಕಗಳನ್ನು, ದೇವಾಲಗಳನ್ನು ರಕ್ಷಣೆ ಮಾಡಬೇಕಾಗಿದ್ದ ಧಾರ್ಮಿಕ ದತ್ತಿ ಇಲಾಖೆಯೇ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಕಲ್ಲಿನ ಕಂಬಕ್ಕೆ ಮೊಳೆ ಹೊಡೆದಿತ್ತು. ಈ ದೇವಾಲಯವು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀನದಲ್ಲಿದೆ ಮತ್ತು ಅವರ ಅನುಮತಿಯಿಲ್ಲದೆ ಇಲ್ಲಿ ಏನನ್ನೂ ಬದಲಾಯಿಸುವಂತಿರಲಿಲ್ಲ, ಈ ಪ್ರಕರಣ ಸಂಬಂಧ ಇದೀಗ ಗುಮಾಸ್ತ ಬಿ.ಜಿ.ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.