ದತ್ತಪೀಠದ ಫಲಕ ತೆಗೆದರೆ, ಪ್ರತಿಭಟನೆ ನಡೆಸುವೆವು ! – ಪ್ರಮೋದ ಮುತಾಲಿಕ ಇವರ ಎಚ್ಚರಿಕೆ

ಚಿಕ್ಕಮಗಳೂರು – ದತ್ತ ಪೀಠದ ಸಮಿತಿ ಮತ್ತು ಅದರ ಫಲಕಗಳು ಬದಲಾಯಿಸಬೇಕೆಂದು ಮುಸಲ್ಮಾನ ಜನಾಂಗದಿಂದ ಆಗ್ರಹಿಸಲಾಗುತ್ತಿರುವುದು ಕೇಳಿದ್ದೇವೆ. ರಾಜ್ಯ ಸರಕಾರವು ಇದನ್ನು ಒಪ್ಪಿದರೆ ರಾಜ್ಯದಲ್ಲಿ ತೀವ್ರ ಪ್ರತಿಭಟನೆ ನಡೆಸುವೆವು, ಎಂದು ದತ್ತಮಾಲ ಅಭಿಯಾನದ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಇವರು ಎಚ್ಚರಿಕೆ ನೀಡಿದರು. ಮುತಾಲಿಕ ಇವರು ಅಘೋರಿ ವಿವೇಕಾನಂದ ಇವರ ಜೊತೆ ದತ್ತ ಪಾದುಕಾದ ದರ್ಶನ ಪಡೆದರು.