‘ನವೆಂಬರ್ 19 ರಂದು ವಿಮಾನದಲ್ಲಿ ಪ್ರಯಾಣಿಸುವವರ ಜೀವಕ್ಕೆ ಅಪಾಯವಿದೆ !’ – ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನು

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನುನಿಂದ ಭಾರತಕ್ಕೆ ಬೆದರಿಕೆ

ನವದೆಹಲಿ – ಖಲಿಸ್ತಾನಿ ಭಯೋತ್ಪಾದಕ ಮತ್ತು ‘ಸಿಖ್ ಫಾರ್ ಜಸ್ಟೀಸ್’ ಸಂಘಟನೆಯ ಮುಖ್ಯಸ್ಥ ಗುರುಪತ ವಂತ ಸಿಂಗ್ ಪನ್ನು ಒಂದು ವಿಡಿಯೋವನ್ನು ಪ್ರಸಾರ ಮಾಡಿ ಭಾರತಕ್ಕೆ ಬೆದರಿಕೆ ಹಾಕಿ ಅದರಲ್ಲಿ. 19 ನವೆಂಬರ್ 2023 ರಂದು ಯಾರೂ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಾರದು, ಇಲ್ಲದಿದ್ದರೆ ಅವರ ಜೀವಕ್ಕೆ ಅಪಾಯವಿದೆ ಎಂದು ಅವರು ಹೇಳಿದ್ದಾನೆ. ಈ ದಿನ ಜಾಗತಿಕ ದಿಗ್ಬಂಧನ ಇರುತ್ತದೆ ಮತ್ತು ನಿಮ್ಮ ಜೀವಕ್ಕೆ ಅಪಾಯವಿರಬಹುದು. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಮತ್ತು ಅದರ ಹೆಸರನ್ನೂ ಬದಲಾಯಿಸಲಾಗುವುದು. ಅದೇ ದಿನ ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯ ಇದೆ.

ಸಂಪಾದಕೀಯ ನಿಲುವು

ಅಮೆರಿಕಾದಲ್ಲಿ ನೆಲೆಸಿ ಇಂತಹ ಬೆದರಿಕೆಗಳನ್ನು ಒಡ್ಡಿ ಗಮನಸೆಳೆದಿರುವ ಪನ್ನುನನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಅಮೆರಿಕಾಗೆ ಏಕೆ ಒತ್ತಾಯಿಸುತ್ತಿಲ್ಲ ?