ಹಿಂದುತ್ವನಿಷ್ಠ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು !

  • ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ

  • ಯಾರೂ ದೂರು ನೀಡದೇ ಪೊಲೀಸರಿಂದಲೇ ದೂರು ದಾಖಲು !

ಕಾರವಾರ – ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಶ್ರೀ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಲಾಯಿತು. ‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಹಿಂದೂಗಳು ಬದುಕುವುದೇ ದುಸ್ತರವಾಗಿದೆ. ಮುಸಲ್ಮಾನರ ಮೇಲೆ ಸಿದ್ದರಾಮಯ್ಯನವರ ಅಭಯಹಸ್ತವಿದೆ’, ಎಂದು ಚಕ್ರವರ್ತಿ ಸೂಲಿಬೆಲೆಯವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದರು. ಅವರು ‘ಜನಗಣಮನ ಅಭಿಯಾನ’ದ ಅಡಿಯಲ್ಲಿ ಕಾರವಾರದ ಕಡವಾಡಕ್ಕೆ ಬಂದಾಗ ಈ ಹೇಳಿಕೆ ನೀಡಿದ್ದರು. ಯಾರಿಂದಲೂ ದೂರು ಬರದಿದ್ದರೂ ಪೊಲೀಸರು ತಾವೇ ಮುಂದಾಗಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.