|

ಕೋಸಿಕಲಾಂ (ಉತ್ತರ ಪ್ರದೇಶ) – ಇಲ್ಲಿನ ಪಂಜಾಬಿ ಮಾರ್ಕೆಟ್ ನ ವಾಹಿದ್ ಕುರೇಶಿ ಎಂಬ ಅಂಗಡಿಯವನು ಪ್ಲಾಸ್ಟಿಕ್ ಚೀಲಗಳ ಮೇಲೆ ‘ಪಂಜಾಬಿ ಮಾರ್ಕೆಟ್’ ಎಂದು ಬರೆಯುವ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ್ದನು. ಇದರಿಂದ ಆಕ್ರೋಶಿತಗೊಂಡ ವ್ಯಾಪಾರಸ್ಥರು ಪೊಲೀಸರಿಗೆ ತಿಳಿಸಿದರು; ಆದರೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಈ ಚೀಲಗಳಿಗೆ ವಿರೋಧ ವ್ಯಕ್ತಪಡಿಸಲಾಯಿತು ಆ ಬಳಿಕ ಪೊಲೀಸರ ಮೇಲೆ ಒತ್ತಡ ನಿರ್ಮಾಣವಾಯಿತು ಮತ್ತು ಅವರು ವಾಹಿದ್ ಕುರೇಶಿಯನ್ನು ಬಂಧಿಸಿದರು. ಶಾಂತಿಭಂಗ ಮಾಡಿರುವ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ನಗರ ಪರಿಷತ್ತಿನ ತೆರಿಗೆ ಇಲಾಖೆಯಿಂದ ಅವನ ಅಂಗಡಿಯ ಮೇಲೆ ದಾಳಿ ನಡೆಸಿ ೨೫ ಕೆಜಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪರಿಷತ್ತಿನ ಕಾರ್ಯಕಾರಿ ಅಧಿಕಾರಿ ನಿಹಾಲ ಸಿಂಗ್ ಅವರು ಈ ಬಗ್ಗೆ ಮಾತನಾಡಿ, ಯಾವುದೇ ರಸ್ತೆಯ, ಪರಿಸರದ ಅಥವಾ ಮಾರುಕಟ್ಟೆಯ ಹೆಸರನ್ನು ಬದಲಾವಣೆ ಮಾಡುವ ಅಥವಾ ಹೆಸರಿಡುವ ಅಧಿಕಾರ ಕೇವಲ ನಗರ ಪರಿಷತ್ತಿಗೆ ಮಾತ್ರ ಇದೆ. ವಾಹಿದ್ ಕುರೇಶಿಯ ಈ ಕೃತ್ಯದಿಂದ ಇಲ್ಲಿನ ವಾತಾವರಣ ಹಾಳಾಯಿತು. ಅಂಗಡಿಯವನಿಗೆ ನೋಟಿಸ್ ನೀಡಲಾಗಿದ್ದು ೩ ದಿನದಲ್ಲಿ ಉತ್ತರ ನೀಡಲು ಸೂಚಿಸಲಾಗಿದೆ. ಆ ಬಳಿಕ ಯೋಗ್ಯ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಪಾದಕೀಯ ನಿಲುವು
|
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!