|

ಕೋಸಿಕಲಾಂ (ಉತ್ತರ ಪ್ರದೇಶ) – ಇಲ್ಲಿನ ಪಂಜಾಬಿ ಮಾರ್ಕೆಟ್ ನ ವಾಹಿದ್ ಕುರೇಶಿ ಎಂಬ ಅಂಗಡಿಯವನು ಪ್ಲಾಸ್ಟಿಕ್ ಚೀಲಗಳ ಮೇಲೆ ‘ಪಂಜಾಬಿ ಮಾರ್ಕೆಟ್’ ಎಂದು ಬರೆಯುವ ಬದಲು ‘ಇಸ್ಲಾಮಿಕ್ ಮಾರ್ಕೆಟ್’ ಎಂದು ಮುದ್ರಿಸಿದ್ದನು. ಇದರಿಂದ ಆಕ್ರೋಶಿತಗೊಂಡ ವ್ಯಾಪಾರಸ್ಥರು ಪೊಲೀಸರಿಗೆ ತಿಳಿಸಿದರು; ಆದರೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಈ ಚೀಲಗಳಿಗೆ ವಿರೋಧ ವ್ಯಕ್ತಪಡಿಸಲಾಯಿತು ಆ ಬಳಿಕ ಪೊಲೀಸರ ಮೇಲೆ ಒತ್ತಡ ನಿರ್ಮಾಣವಾಯಿತು ಮತ್ತು ಅವರು ವಾಹಿದ್ ಕುರೇಶಿಯನ್ನು ಬಂಧಿಸಿದರು. ಶಾಂತಿಭಂಗ ಮಾಡಿರುವ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ನಗರ ಪರಿಷತ್ತಿನ ತೆರಿಗೆ ಇಲಾಖೆಯಿಂದ ಅವನ ಅಂಗಡಿಯ ಮೇಲೆ ದಾಳಿ ನಡೆಸಿ ೨೫ ಕೆಜಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪರಿಷತ್ತಿನ ಕಾರ್ಯಕಾರಿ ಅಧಿಕಾರಿ ನಿಹಾಲ ಸಿಂಗ್ ಅವರು ಈ ಬಗ್ಗೆ ಮಾತನಾಡಿ, ಯಾವುದೇ ರಸ್ತೆಯ, ಪರಿಸರದ ಅಥವಾ ಮಾರುಕಟ್ಟೆಯ ಹೆಸರನ್ನು ಬದಲಾವಣೆ ಮಾಡುವ ಅಥವಾ ಹೆಸರಿಡುವ ಅಧಿಕಾರ ಕೇವಲ ನಗರ ಪರಿಷತ್ತಿಗೆ ಮಾತ್ರ ಇದೆ. ವಾಹಿದ್ ಕುರೇಶಿಯ ಈ ಕೃತ್ಯದಿಂದ ಇಲ್ಲಿನ ವಾತಾವರಣ ಹಾಳಾಯಿತು. ಅಂಗಡಿಯವನಿಗೆ ನೋಟಿಸ್ ನೀಡಲಾಗಿದ್ದು ೩ ದಿನದಲ್ಲಿ ಉತ್ತರ ನೀಡಲು ಸೂಚಿಸಲಾಗಿದೆ. ಆ ಬಳಿಕ ಯೋಗ್ಯ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!