ದೇವರಿಯಾ (ಉತ್ತರಪ್ರದೇಶ)ದಲ್ಲಿ ಭೂವಿವಾದ; ಒಂದೇ ಕುಟಂಬದ ೫ ಜನ ಸೇರಿ ೬ ಜನರ ಕೊಲೆ

ದೇವರಿಯಾ (ಉತ್ತರಪ್ರದೇಶ) – ಇಲ್ಲಿ ಮನೆಗೆ ನುಗ್ಗಿ ಒಂದೇ ಕುಟಂಬದ ಪತಿ-ಪತ್ನಿ, ೨ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇವರ ಕತ್ತು ಕೊಯ್ದು ಗುಂಡು ಹಾರಿಸಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕುಟಂಬದ ೮ ವರ್ಷದ ಹುಡುಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ಹತ್ಯಾಕಾಂಡವು ಭೂವಿವಾದದಿಂದ ನಡೆದಿದೆ ಎನ್ನಲಾಗಿದೆ. ಪೋಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಪೋಲೀಸರ ಹೇಳಿಕೆ ಪ್ರಕಾರ, ಬೆಳಗ್ಗೆ ಪ್ರೇಮ ಯಾದವ ಇವರು ಸತ್ಯಪ್ರಕಾಶ ದುಬೆ ಇವರ ಮನೆಗೆ ಹೋದಾಗ ಅವರ ನಡುವೆ ವಾಗ್ವಾದ ಮತ್ತು ಹೊಡೆದಾಟ ನಡೆದಿದೆ, ಇದರಲ್ಲಿ ಪ್ರೇಮ ಯಾದವ್ ಸಾವನ್ನಪ್ಪಿದ್ದಾರೆ. ಸ್ವಲ್ಪ ಸಮಯದ ನಂತರ ಪ್ರೇಮ ಯಾದವ್ ಬೆಂಬಲಿಗರು ಸತ್ಯಪ್ರಕಾಶ ದುಬೆರವರ ಮನೆಯ ಮೇಲೆ ದಾಳಿ ಮಾಡಿ ಅವರ ಸಹಿತ ಅವರ ಕುಟಂಬದವರನ್ನು ಕೊಂದರು. “ಪ್ರೇಮ ಯಾದವರನ್ನು ಯಾರು ಕೊಂದವರು ?” ಎಂಬುದು ಇನ್ನೂ ಸ್ಪಷ್ಟವಾಗಿಲ್ಲ; ಆದರೆ ಸತ್ಯಪ್ರಕಾಶನು ಅಪರಾಧ ಮಾಡಿದ್ದರೆ ತನ್ನ ಕುಟಂಬದೊಂದಿಗೆ ಮನೆಯಲ್ಲಿ ಏಕೆ ಇರುತ್ತಿದ್ದನು ? ಎಂದು ಜನರ ಅನಿಸಿಕೆಯಾಗಿದೆ.