ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, “ಈ ಮನಸ್ಥಿತಿಯಿಂದ ಹೊರ ಬರಬೇಕಾಗಿದೆ ! – ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ

ತಿರುವನಂತಪುರಂ (ಕೇರಳ) – ನನ್ನ ಅಭಿಪ್ರಾಯದಲ್ಲಿ ನಮಗೆ ‘ಹಿಂದಿನ ಕಾಲದ ಘಟನೆಗಳಿಂದ ನಿರ್ಮಾಣವಾಗಿರುವ ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, ಅವು ಅಭಿವೃದ್ದಿಶೀಲ ರಾಷ್ಟ್ರಗಳ ವಿರುದ್ಧವಾಗಿವೆ” ಎಂಬ ಮನಸ್ಥಿತಿಯಿಂದ ಹೊರಬರಬೇಕು ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್,ಜೈಶಂಕರ ಇವರು ಹೇಳಿದರು. ‘ನಾನು ಪಾಶ್ಚಿಮಾತ್ಯ ದೇಶಗಳ ಪರ ವಕಾಲತ್ತು ವಹಿಸುತ್ತಿಲ್ಲ’, ಎಂದೂ ಸಹ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಅವರು ವಾರ್ತಾವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿರುವಾಗ ಹೇಳುತ್ತಿದ್ದರು.