ನೂತನ ಸಂಸತ್‌ ಭವನದ ಪ್ರಾಂಗಣದಲ್ಲಿ ರಾಷ್ಟ್ರದ್ವಜಾರೋಹಣ !

ನವ ದೆಹಲಿ – ಇಲ್ಲಿನ ನೂತನ ಸಂಸತ್‌ ಭವನದ ಪ್ರಾಂಗಣದಲ್ಲಿ ಸೆಪ್ಟೆಂಬರ್‌ ೧೭ ರಂದು ಉಪರಾಷ್ಟ್ರಪತಿ ಜಗದೀಪ ಧನಖಡ ಇವರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಇವರೂ ಉಪಸ್ಥಿತರಿದ್ದರು. ಸೆಪ್ಟೆಂಬರ್‌ ೧೯ ರಂದು ಶ್ರೀ ಗಣೇಶಚತುರ್ಥಿಯ ದಿನದಂದು ಸಂಸತ್ ನ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಈ ದಿನದಿಂದಲೇ ಹೊಸ ಕಟ್ಟಡದಲ್ಲಿ ಕಾರ್ಯಕಲಾಪಗಳು ಆರಂಭವಾಗಲಿವೆ.