‘ಕಾಂಗ್ರೆಸ್ ಈಗ ‘ಗರ್ವ್ ಸೆ ಕಹೊ ಹಮ ಹಿಂದೂ ಹೆ'(ಹೆಮ್ಮೆಯಿಂದ ಹೇಳಿ ನಾವು ಹಿಂದೂ ಆಗಿದ್ದೇವೆ) ಎಂದು ಹೇಳುತ್ತಿದೆ !(ಯಂತೆ) – ಕಾಂಗ್ರೆಸ್ಸಿನ ನಾಯಕ ಮತ್ತು ಮಾಜಿ ರಾಜ್ಯಪಾಲ ಕುರೇಶಿ

ಕಾಂಗ್ರೆಸ್ಸಿನ ನಾಯಕ ಮತ್ತು ಮಾಜಿ ರಾಜ್ಯಪಾಲ ಕುರೇಶಿ ಇವರ ಆಕ್ರೋಶ !

ಭೋಪಾಲ – ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮುನ್ನ ರಾಜ್ಯದಲ್ಲಿನ ರಾಜಕಾರಣ ಕಾವೇರಿದೆ. ಇದರ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಪಾಲ ಅಜೀಜ್ ಕುರೇಶಿ ಇವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ಸಿನ ನಾಯಕ ಕಮಲನಾಥ ಮತ್ತು ಕಾಂಗ್ರೆಸ್ ಪಕ್ಷ ಇವರು ಹಿಂದುತ್ವದ ಕಡೆಗೆ ಇಟ್ಟಿರುವ ಹೆಜ್ಜೆಯಿಂದ ಕಾಂಗ್ರೆಸ್ಸಿನ ನಾಯಕ ಮಾಜಿ ರಾಜ್ಯಪಾಲ ಅಜೀಜ್ ಕುರೇಶಿ ಇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ರಾಜೀವ ಗಾಂಧಿ ಇವರ ಜನ್ಮದಿನದ ಪ್ರಯುಕ್ತ ವಿದಿಶಾದಲ್ಲಿ ಆಯೋಜಿಸಲಾಗ ಅಲ್ಪಸಂಖ್ಯಾತರ ಅಧಿವೇಶನದಲ್ಲಿ ಅವರು ಮಾಡಿರುವ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅಜೀಜ್ ಕುರೇಶಿ ಇವರು, ‘ನೆಹರುರವರ ಉತ್ತರಾಧಿಕಾರಿಯಾಗಿರುವ ಕಾಂಗ್ರಸ್ ನ ಜನರು ಇಂದು ಧಾರ್ಮಿಕ ಯಾತ್ರೆಯನ್ನು ನಡೆಸುತ್ತಿದ್ದಾರೆ, ‘ಗರ್ವ್ ಸೆ ಕಹೊ ಹಮ ಹಿಂದೂ ಹೆ’ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ನ ಕಚೇರಿಯಲ್ಲಿ ದೇವತೆಗಳ ಮೂರ್ತಿಯನ್ನು ಸ್ಥಾಪಿಸುತ್ತಿದ್ದಾರೆ. ಜೈ ಗಂಗಾಮಾತಾ, ಜೈ ನರ್ಮದಾ ಮಾತಾ, ಎಂದು ಘೋಷಣೆ ನೀಡುತ್ತಿದ್ದಾರೆ, ಇದು ನಾಚಿಕೆಯಸಂಗತಿ.’ ಎಂದು ಹೇಳಿದರು.

‘ಮುಸಲ್ಮಾನರು ಕೈಯಲ್ಲಿ ಬಳೆ ತೊಟ್ಟಿಲ್ಲ !’

ಅಜೀಜ್ ಖುರೇಷಿ ಮಾತು ಮುಂದುವರೆಸುತ್ತಾ, “ನೀವು ನಮ್ಮ ಮನೆ ಮತ್ತು ಅಂಗಡಿಗಳನ್ನು ಸುಟ್ಟುಹಾಕುತ್ತೀರಿ, ನೀವು ನಮ್ಮ ತಾಯಿ ಮತ್ತು ಸಹೋದರಿಯರನ್ನು ಅವಮಾನಿಸುತ್ತೀರಿ. (ಇದನ್ನು ಕಳ್ಳನಿಗೊಂದು ಪಿಳ್ಳೆ ನೆವ ಎನ್ನುತ್ತಾರೆ ! ಮತಾಂಧ ಮುಸ್ಲಿಮರು ಹಿಂದೂ ಮನೆಗಳನ್ನು ಸುಡುತ್ತಾರೆ, ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ಮೂಲಕ ಮೋಸ ಮಾಡುತ್ತಾರೆ, ಅವರನ್ನು ಮತಾಂತರಿಸುತ್ತಾರೆ, ಇದು ನೈಜ ಸ್ಥಿತಿ. – ಸಂಪಾದಕರು) ನಾವು ಒಂದು ಮಿತಿಯವರೆಗೆ ಸಹಿಸಿಕೊಳ್ಳುತ್ತೇವೆ; ಆದರೆ ಇದು ಮಿತಿ ಮೀರಿದಾಗ ಮುಸಲ್ಮಾನು ಕೈಯಲ್ಲಿ ಬಳೆ ತೊಟ್ಟಿಕೊಂಡು ಕುಳಿತುಕೊಳ್ಳುವುದಿಲ್ಲ. 22 ಕೋಟಿ ಮುಸ್ಲಿಮರಲ್ಲಿ 2 ಕೋಟಿ ಮುಸ್ಲಿಮರು ಹತರಾದರೂ ತೊಂದರೆ ಇಲ್ಲ’’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಬೆದರಿಕೆಗಳ ವಿರುದ್ಧ ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಿದ್ಧರಿದ್ದೀರಾ ?

ಮುಸಲ್ಮಾನರು ನಿಮ್ಮ ಗುಲಾಮರಲ್ಲ !

ಅಜಿಜ್ ತಮ್ಮ ಮಾತನ್ನು ಮುಂದುವರೆಸಿ, ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ, ಮುಸಲ್ಮಾನರು ನಿಮ್ಮ ಗುಲಾಮರಲ್ಲ, ನೀವು ಅವರಿಗೆ ಕೆಲಸ ಕೊಡುತ್ತಿಲ್ಲ, ಅವರಿಗೆ ಪೊಲೀಸ್, ಸೈನ್ಯಕ್ಕೆ ತೆಗೆದುಕೊಳ್ಳುವುದಿಲ್ಲ; ಹಾಗಾದರೆ ಮುಸ್ಲಿಮರು ನಿಮಗೆ ಏಕೆ ಮತ ಹಾಕಬೇಕು? (ನೀವು ಮತ​ಚಲಾಯಿಸಲು ಬಯಸದಿದ್ದರೆ, ನೀವು ಪಾಕಿಸ್ತಾನಕ್ಕೆ ತೊಲಗಿ, ಎಂದು ಯಾರಿಗೆ ಅನಿಸಿದರೆ ತಪ್ಪೇನು ? – ಸಂಪಾದಕರು)

ಸಂಪಾದಕೀಯ ನಿಲುವು

ಪಕ್ಷದ ಸ್ಥಾಪನೆಯಿಂದ ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ಸಿಗೆ ಕಪಾಳ ಮೋಕ್ಷ !

ಹೆಚ್ಚಿನ ಮುಸಲ್ಮಾನರಿಗೆ ಎಷ್ಟೇ ಸೌಲಭ್ಯ ಪೂರೈಸಿದರು ಮತ್ತು ಅವರನ್ನು ತಲೆಯ ಮೇಲೆ ಕೂಡಿಸಿದರೂ ಅವರಿಗೆ ಸಮಾಧಾನ ಇರುವುದಿಲ್ಲ. ಅವರನ್ನು ಓಲೈಸುವ ಜಾತ್ಯತೀತ ಪಕ್ಷದವರು ಇದನ್ನು ಗಮನದಲ್ಲಿಡಬೇಕು !

ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ‘ಗರ್ವ್ ಸೆ ಕಹೊ ಹಮ ಹಿಂದೂ ಹೆ’ ಎಂದು ಹೇಳುತ್ತಿದ್ದರೇ ಹಾಗೂ ಹಿಂದುಗಳ ನಂಬಿಕೆ ದ್ರೋಹ ಮಾಡುವರು, ಇದು ಹಿಂದೂಗಳು ಯಾವಾಗಲೂ ಗಮನದಲ್ಲಿಡಬೇಕು !