ಗಂಡನ ಮಿತಿಮೀರಿ ಸರಾಯಿ ಕುಡಿತ ಮತ್ತು ಕುಟುಂಬದ ಬಗ್ಗೆ ಮುತುವರ್ಜಿ ವಹಿಸದಿರುವುದು, ಇದು ಮಾನಸಿಕ ಕ್ರೌರ್ಯ ! – ಛತ್ತಿಸಗಡ ಉಚ್ಚ ನ್ಯಾಯಾಲಯ

ರಾಂಚಿ (ಛತ್ತಿಸಗಡ) – ಗಂಡನ ಮಿತಿಮೀರಿ ಸರಾಯಿ ಕುಡಿತ ಮತ್ತು ಕುಟುಂಬದ ಬಗ್ಗೆ ಮುತುವರ್ಜಿ ವಹಿಸದಿರುವುದು, ಇದು ಮಾನಸಿಕ ಕ್ರೌರ್ಯವಾಗಿದೆ, ಎಂದು ಛತ್ತಿಸಗಡ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌತಮ ಭಾದುರಿ ಮತ್ತು ಸಂಜಯ ಅಗ್ರವಾಲ ಇವರು ಉಲ್ಲೇಖಿಸಿದ್ದಾರೆ. ಪಾಯಲ್ ಶರ್ಮಾರ ವಿರುದ್ಧ ಉಮೇಶ ಶರ್ಮಾ ಇವರ ಈ ಮೊಕದ್ದಮೆಯಲ್ಲಿನ ಕ್ರೂರತೆಯ ಕಾರಣದಿಂದ ವಿವಾಹ ವಿಚ್ಛೇದನಕ್ಕಾಗಿ ಹೆಂಡತಿಯು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದರು. ಗಂಡನು ಸರಾಯಿಯ ಗುಂಗಿನಲ್ಲಿ ಹೆಂಡತಿಯನ್ನು ಅವಾಚ್ಯಪದಗಳಿಂದ ನಿಂದಿಸುತ್ತಿದ್ದನು. ಪರಿಸ್ಥತಿಯು ಇಷ್ಟೊಂದು ಹದಗೆಟ್ಟಿತ್ತು ಎಂದರೆ ಸರಾಯಿ ಖರೀದಿಸಲು ಅವನು ಮನೆಯಲ್ಲಿನ ವಸ್ತುಗಳನ್ನೂ ಮಾರಿದನು, ಎಂದು ನ್ಯಾಯಾಲಯದಲ್ಲಿ ಹೇಳಲಾಗಿದೆ.