ಪಿಲಿಭಿತ್ (ಉತ್ತರ ಪ್ರದೇಶ) ಇಲ್ಲಿ ಮೊಹರಂ ಮೆರವಣಿಗೆಯಲ್ಲಿನ ಮತಾಂಧರಿಂದ ಕಾವಾಡ ಯಾತ್ರಿಕರ ಮೇಲೆ ಕಲ್ಲುತೂರಾಟ !

ಕಾವಾಡ ಯಾತ್ರೆಯಲ್ಲಿ ‘ಡಿಜೆ’ (ದೊಡ್ಡ ಸಂಗೀತ ಯಂತ್ರ) ನಿಲ್ಲಿಸಲು ಹೇಳಿದ್ದರಿಂದ ವಿವಾದ !

ಪಿಲಿಭಿತ (ಉತ್ತರಪ್ರದೇಶ) – ಇಲ್ಲಿಯ ಬೆರಲಿ ಹೆದ್ದಾರಿಯಲ್ಲಿ ಖಮರಿಯ ಸೇತುವೆ ಮೇಲೆ ಮೊಹರಂ ಮೆರವಣಿಗೆ ತಲುಪಿದ ನಂತರ ಅಲ್ಲಿಂದ ಹೋಗುತ್ತಿರುವ ಕಾವಡ ಯಾತ್ರಿಕರು ‘ಡಿಜೆ’ಯಲ್ಲಿ ಧಾರ್ಮಿಕ ಗೀತೆಗಳನ್ನು ಹಾಕಿ ಹೋಗುತ್ತಿರುವಾಗ ಮುಸಲ್ಮಾನರು ಅವರಿಗೆ ‘ಡಿಜೆ’ ನಿಲ್ಲಿಸಲು ಹೇಳಿದರು. ಅದನ್ನು ಕಾವಡ್ ಯಾತ್ರಿಕರು ನಿರಾಕರಿಸಿರುವುದರಿಂದ ನಡೆದ ವಿವಾದದಿಂದ ಮತಾಂಧ ಮುಸಲ್ಮಾನರು ಅವರ ಮೇಲೆ ಕಲ್ಲು ತೂರಾಟ ನಡೆಸಿದರು. ಅಲ್ಲಿ ಉಪಸ್ಥಿತ ಪೊಲೀಸರ ಮೇಲೆ ಕೂಡ ಕಲ್ಲು ತೂರಾಟ ನಡೆಸಲಾಯಿತು. ಇದರಲ್ಲಿ ಒಬ್ಬ ಹಿರಿಯ ಪೊಲೀಸ ಅಧಿಕಾರಿ ಗಾಯಗೊಂಡಿದ್ದಾರೆ. ಆ ಸಮಯದಲ್ಲಿ ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪೊಲೀಸರು ಎರಡು ಪಕ್ಷದವರಿಗೆ ತಿಳಿಸಿ ಹೇಳಿ ಮುಂದೆ ಕಳುಹಿಸಿದರು. ಈ ಪ್ರಕರಣದಲ್ಲಿ ದೂರು ದಾಖಲಿಸಲಾಗಿಲ್ಲ ಎಂದು ಹೇಳಲಾಗಿದೆ. (ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡರು ಕೂಡ ಮತಾಂಧರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಇದು ಪೊಲೀಸರಿಗೆ ಲಚ್ಚಸ್ಪದ ! – ಸಂಪಾದಕರು)

ಬಿಹಾರದಲ್ಲಿ ಮೂರು ಸ್ಥಳಗಳಲ್ಲಿ ಮೊಹರಂ ಮೆರವಣಿಗೆಯಲ್ಲಿ ಹಿಂಸಾಚಾರ

ಬಾಂಬ್ ಸ್ಪೋಟದಲ್ಲಿ ಒಂದು ಹುಡುಗಿಗೆ ಗಾಯ

ಮೊಹರಂ ಮೆರವಣಿಗೆಯಲ್ಲಿ ಬಾಂಬ್ ಹೇಗೆ ತರಲಾಗುತ್ತದೆ ? ಮತ್ತು ಇದರ ಉಪಯೋಗ ಹೇಗೆ ಮಾಡಲಾಗುತ್ತದೆ ? ಪೊಲೀಸರ ಬೇಹುಗಾರರಿಗೆ ಇದರ ಮಾಹಿತಿ ಹೇಗೆ ದೊರೆಯುವುದಿಲ್ಲ ? ನಾಳೆ ಬೃಹತ್ ಪ್ರಮಾಣದಲ್ಲಿ ಮತಾಂಧರು ಬಹಿರಂಗವಾಗಿ ಬಾಂಬ್ ಸ್ಪೋಟ ನಡೆಸಿದರೆ, ಭಾರತದ ಪಾಕಿಸ್ತಾನವಾಗಲು ಸಮಯ ಬೇಕಾಗುವುದಿಲ್ಲ. ಈ ಪರಿಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !

೧. ಬಿಹಾರದ ೩ ಸ್ಥಳಗಳಲ್ಲಿ ಮೊಹರಂ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದೆ. ಭಾಗಲಪುರ ಇಲ್ಲಿ ಮೆರವಣಿಗೆ ಹೋಗುವಾಗ ಮೆರವಣಿಗೆಯಲ್ಲಿನ ಯಾರೋ ಒಬ್ಬರು ಬಾಂಬ್ ಎಸೆದಿದ್ದಾರೆ. ಅದು ಸ್ಪೋಟವಾಗಿ ರಾಧಾಕುಮಾರಿ ಎಂಬ ಹುಡುಗಿ ಗಾಯಗೊಂಡಿದ್ದಾಳೆ. ಅದರ ನಂತರ ಸ್ಥಳೀಯರು ಮೆರವಣಿಗೆಯನ್ನು ವಿರೋಧಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದು ಮೆರವಣಿಗೆ ಮುಂದಕ್ಕೆ ಕಳುಹಿಸಿದರು.

೨. ಬಲಿಯಾ ಗ್ರಾಮದಲ್ಲಿ ಮೊಹರಂನ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಎರಡು ಕಡೆಯಿಂದ ಕಲ್ಲು ತೂರಾಟ ನಡೆಯಿತು. ಇದರಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡರು.

೩. ಕೈಮೂರು ಜಿಲ್ಲೆಯಲ್ಲಿನ ಭಭುವಾ ನಗರದಲ್ಲಿ ಗುರುದ್ವಾರದ ಹತ್ತಿರ ಮೆರವಣಿಗೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆಸಿದ್ದರಿಂದ ಎರಡು ಗುಂಪಿನಿಂದಲೂ ಕಲ್ಲು ತೂರಾಟ ನಡೆಯಿತು. ಇದರಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದೆ ಹಾಗೂ ಕೆಲವು ಜನರು ಗಾಯಗೊಂಡಿದ್ದಾರೆ. ಪೊಲೀಸರು ತಕ್ಷಣವೇ ಪರಿಸ್ಥಿತಿ ಹತೋಟಿಗೆ ತಂದರು.

ಸಂಪಾದಕೀಯ ನಿಲುವು

ದಿನದಲ್ಲಿ ೫ ಬಾರಿ ಮಸೀದಿಯಿಂದ ಅನಾವಶ್ಯಕವಾಗಿ ಅಜಾನಅನ್ನು ದೇಶದಲ್ಲಿನ ಹಿಂದುಗಳಿಗೆ ಕೇಳಿಸಲಾಗುತ್ತದೆ ಮತ್ತು ಹಿಂದುಗಳು ಕೂಡ ಅದನ್ನು ಸಹಿಸಿಕೊಳ್ಳುತ್ತಾರೆ, ಇದರ ಬಗ್ಗೆ ಮುಸಲ್ಮಾನರು ಏಕೆ ಮಾತನಾಡುವುದಿಲ್ಲ ?