ವಿವಾಹಕ್ಕಾಗಿ ರಶೀದನಿಂದ ದಲಿತ ಹಿಂದೂ ಹುಡುಗಿಯ ಅಪಹರಣ !

ಶಾಮಲಿ (ಉತ್ತರಪ್ರದೇಶ) ಯಲ್ಲಿ ‘ಲವ್ ಜಿಹಾದ್’ಗೆ ಸಿಲುಕಿರುವ ಸಂತ್ರಸ್ತೆಯ ತಂದೆಯ ಆರೋಪ

ಶಾಮಲಿ (ಉತ್ತರಪ್ರದೇಶ) – ಇಲ್ಲಿಯ ಓರ್ವ ೧೯ ವರ್ಷದ ದಲಿತ ಹಿಂದೂ ಹುಡುಗಿಯನ್ನು ರಶೀದ ಎಂಬ ಮುಸಲ್ಮಾನನು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಂದೆಯು ಈ ಬಗ್ಗೆ ಹೇಳುತ್ತಾ, ಅವರ ಮಗಳು ಬಾಗಪತ ಎಂಬಲ್ಲಿರುವ ಅವರ ಸಂಬಂಧಿಕರ ಮನೆಗೆ ಹೋಗಿದ್ದಳು. ಜೂನ್ ೧೧ ರಿಂದ ಆಕೆ ನಾಪತ್ತೆಯಾಗಿದ್ದು ರಶೀದ್ ಎಂಬ ಶಾಮಲಿ ಇಲ್ಲಿಯ ಮುಸಲ್ಮಾನನು ಆಕೆಯ ಅಪಹರಣ ಮಾಡಿದ್ದಾನೆ’, ಎಂದಿದ್ದಾರೆ. ಪೊಲೀಸರು ದೂರು ದಾಖಲಿಸಿರುವುದರಿಂದ ಜೂನ್ ೧೫ ರ ರಾತ್ರಿ ರಶೀದನ ಕುಟುಂಬದವರಾದ ಪರವೇಝ , ನದೀಮ್, ಶಹಜಾದ ಮತ್ತು ನೌಶಾದ ಇವರು ಸಂತ್ರಸ್ತೆಯ ಮನೆಗೆ ನುಗ್ಗಿ `ಹುಡುಗಿಯನ್ನು ಅಪಹರಿಸಿದಂತೆ ಅವರ ಎರಡನೆಯ ಮಗಳನ್ನೂ ಅಪಹರಿಸುತ್ತೇವೆ ಹಾಗೂ ಮಗಳ ತಾಯಿಯ ಹತ್ಯೆ ಮಾಡುತ್ತೇವೆ, ಎಂದು ಬೆದರಿಕೆಯೊಡ್ಡಿದ್ದಾರೆ.

ಈ ಬೆದರಿಕೆ ನೀಡಿರುವ ಪ್ರಕರಣದಲ್ಲಿ ಪರವೇಝ ಮತ್ತು ಶಹಜಾದ ಇವರನ್ನು ಬಂಧಿಸಲಾಗಿದೆ. ಎರಡು ಪ್ರಕರಣದ ದೂರು ದಾಖಲಿಸಿ ಮುಂದಿನ ವಿಚಾರಣೆ ನಡೆಯುತ್ತಿದೆ. ಇಂತಹದರಲ್ಲಿಯೆ ಸಂತ್ರಸ್ತೆಯ ತಂದೆ ಮುಸಲ್ಮಾನರ ಭಯದಿಂದ ಪಲಾಯನ ಮಾಡುವ ಸೂಚನೆ ಕೂಡ ನೀಡಿದ್ದಾರೆ.

ರಶೀದನು ಸಂತ್ರಸ್ತೆಗಿಂತಲೂ ಎರಡು ಪಟ್ಟು ಹೆಚ್ಚು ವಯಸ್ಸಿನವನು ; ೪ ಮಕ್ಕಳ ತಂದೆ ! – ಸಂತ್ರಸ್ತೆಯ ಸಹೋದರನ ಆರೋಪ

ಈ ಪ್ರಕರಣದಲ್ಲಿ ಸಂತ್ರಸ್ತೆಯ ಸಹೋದರನು ಹೇಳುತ್ತಾ, ರಶೀದ್ ಇವನು ನನ್ನ ಸಹೋದರಿಗಿಂತಲೂ ಹೆಚ್ಚು ಕಡಿಮೆ ಎರಡುಪಟ್ಟು ಹೆಚ್ಚು ವಯಸ್ಸಿನವನು ಹಾಗೂ ಅವನು ಮೊದಲೇ ೪ ಮಕ್ಕಳ ತಂದೆಯಾಗಿದ್ದಾನೆ’, ಎಂದಿದ್ದಾನೆ.

 

ಸಂಪಾದಕೀಯ ನಿಲುವು

  • ‘ಜಯ ಭೀಮ ಜಯ ಮಿಮ’ (ಡಾ. ಬಾಬಾಸಾಹೇಬ್ ಅಂಬೇಡ್ಕರ್ ಇವರ ಅನುಯಾಯಿಗಳು ಮತ್ತು ಮುಸಲ್ಮಾನರ ಮೈತ್ರಿ ) ಈ ರೀತಿಯ ಘೋಷಣೆ ಕೂಗುವವರು ಈಗ ಇದರ ಬಗ್ಗೆ ಏಕೆ ಏನು ಮಾತನಾಡುವುದಿಲ್ಲ?
  • ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಮತ್ತು ಮತಾಂತರ ನಿಷೇಧ ಕಾನೂನು ಇದ್ದರೂ ಅಲ್ಲಿಯ ಮತಾಂಧ ಮುಸಲ್ಮಾನರಿಗೆ ಕಾನೂನಿನ ಯಾವುದೇ ಭಯ ಇಲ್ಲ ಎಂದು ಪದೇ ಪದೇ ನಡೆಯುವ ಇಂತಹ ಘಟನೆಗಳಿಂದ ತೋರ್ಪಡುತ್ತದೆ. ಇಂತಹವರನ್ನು ದಾರಿಗೆ ತರಲು ಕಾನೂನಿನಲ್ಲಿ ಜೀವಾವಧಿ ಅಥವಾ ಗಲ್ಲು ಶಿಕ್ಷೆಯ ಏರ್ಪಾಡು ಮಾಡುವುದು ಅವಶ್ಯಕವಾಗಿದೆ !