ಕಾಂಗ್ರೆಸನ ಮುಸಲ್ಮಾನ ಮುಖಂಡ ಹಸನುರ್ ಇಸ್ಲಾಮ್ ನಿಂದ ತನ್ನ ಪ್ರಿಯತಮೆ ಭಾಜಪದ ಮಹಿಳಾ ನಾಯಕಿಯ ಹತ್ಯೆ !

ಆಸ್ಸಾಂನಲ್ಲಿ ಭಾಜಪದ ಮಹಿಳಾ ನಾಯಕಿ ಲವ್ ಜಿಹಾದ್ ಗೆ ಬಲಿ

ಕಾಂಗ್ರೆಸನ ಮುಸಲ್ಮಾನ ಮುಖಂಡ ಹಸನುರ್ ಇಸ್ಲಾಮ್ಬಿ ಮತ್ತು ಭಾಜಪದ ಮಹಿಳಾ ನಾಯಕಿ ಜೊನಾಲಿ ನಾಥ್

ಗೌಹಾಟಿ (ಆಸ್ಸಾಂ) – ರಾಜ್ಯದ ಗೋಲಪಾರಾ ಜಿಲ್ಲೆಯ ಭಾಜಪದ ಮಹಿಳಾ ನಾಯಕಿ ಜೋನಾಲಿ ನಾಥಳನ್ನು ಅವಳ ಮುಸಲ್ಮಾನ ಪ್ರಿಯಕರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ಹಸನುರ್ ಇಸ್ಲಾಮ್ ಹತ್ಯೆ ಮಾಡಿ, ಶವವನ್ನು ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಮೇಲೆಸೆದನು. ಈ ಘಟನೆ ಜೂನ 11 ರಂದು ಸಾಯಂಕಾಲ ನಡೆದಿದ್ದು ಇಸ್ಲಾಮ್ ಗೆ ಜೂನ 12 ರಂದು ಬೆಳಿಗ್ಗೆ ಬಂಧಿಸಲಾಗಿದೆ. ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

1. ಸ್ಥಳೀಯ ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ ಹಸನುರ್ ಇಸ್ಲಾಮ್ ಈತ ಗೋಲಪಾರಾ ಮಟಿಯಾ ಕ್ಷೇತ್ರದ ಕಾಂಗ್ರೆಸ್ ನಾಯಕನಾಗಿದ್ದು, ಈ ಮೊದಲು ಅವನು `ಆಲ್ ಅಸಮ್ ಮೈನಾರಿಟಿ ಸ್ಟುಡೆಂಟ್ಸ ಯೂನಿಯನ್’ ಸದಸ್ಯನಾಗಿದ್ದನು.

2. ಪೊಲೀಸರು, ಜೊನಾಲಿ ನಾಥ ಮತ್ತು ಇಸ್ಲಾಮ್ ಇವರಿಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ಪ್ರೇಮಸಂಬಂಧವಿತ್ತು. ಮಧ್ಯಂತರದಲ್ಲಿ ಇಸ್ಲಾಮ್ ಬೇರೆ ಮಹಿಳೆಯನ್ನು ವಿವಾಹವಾಗಿದ್ದರಿಂದ ಜೊನಾಲಿ ಇಸ್ಲಾಮ್ ಮೇಲೆ ಕೋಪಗೊಂಡಿದ್ದಳು ಎಂದು ಹೇಳಿದ್ದಾರೆ.

3. ಜೂನ 11 ರಂದು ಸಾಯಂಕಾಲ ಜೊನಾಲಿ ಇಸ್ಲಾಮ್ ನ ವಾಹನದಲ್ಲಿ ಕುಳಿತುಕೊಂಡ ಬಳಿಕ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಇಸ್ಲಾಮ್ ಜೊನಾಲಿ ಪ್ರಜ್ಞೆ ತಪ್ಪುವವರೆಗೆ ಮುಖಕ್ಕೆ ಹೊಡೆದನು.

4. ವೈದ್ಯರು, ಜೊನಾಲಿಗೆ ಯಾವುದೋ ಹರಿತವಾದ ಶಸ್ತ್ರದಿಂದ ಹಲ್ಲೆ ನಡೆಸಲಾಗಿದೆಯೆಂದು ಹೇಳಿದ್ದಾರೆ. ಜೊನಾಲಿ ಕೂಡ ವಿವಾಹಿತೆಯಾಗಿದ್ದು, ಅವಳಿಗೆ ಒಬ್ಬ ಮಗಳಿದ್ದಾಳೆ. (ಮತಾಂಧರು ವಿವಾಹಿತ ಹಿಂದೂ ಮಹಿಳೆಯರನ್ನು ಯಾವ ರೀತಿ ಪ್ರೇಮದ ಬಲೆಯಲ್ಲಿ ಸೆಳೆದುಕೊಳ್ಳುತ್ತಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ! – ಸಂಪಾದಕರು)

ಸಂಪಾದಕರ ನಿಲುವು

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷದ ಓರ್ವ ಮಹಿಳಾ ನಾಯಕಿಯ ಸ್ಥಿತಿ ಹೀಗಾದರೆ, ಸಾಮಾನ್ಯ ಹಿಂದೂ ಯುವತಿಯರು ಮತ್ತು ಮಹಿಳೆಯರ ರಕ್ಷಣೆಯ ವಿಚಾರವನ್ನು ಮಾಡದಿರುವುದೇ ಲೇಸು !

ಲವ್ ಜಿಹಾದ್ ನ ಈ ಭಯಾನಕ ರೂಪವನ್ನು ನಷ್ಟಗೊಳಿಸಲು ಈಗಲಾದರೂ ಸರಕಾರ ರಾಷ್ಟ್ರವ್ಯಾಪಿ ಕಠೋರ ಲವ್ ಜಿಹಾದ ವಿರೋಧಿ ಕಾನೂನು ರಚಿಸಬೇಕು ಎನ್ನುವುದು ಹಿಂದೂಗಳ ಅಪೇಕ್ಷೆ !