ಮ. ಗಾಂಧಿಯವರ ಹತ್ಯೆ ಮಾಡಿದ್ದರೂ ಕೂಡ, ನಥುರಾಮ ಗೋಡ್ಸೆ ಭಾರತದ ಸುಪುತ್ರ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ರಾಯಪುರ (ಛತ್ತಿಸ್ಗಢ) – ನಥುರಾಮ ಗೋಡ್ಸೆ ಇವರು ಮ. ಗಾಂಧಿ ಇವರ ಹತ್ಯೆ ಮಾಡಿದ್ದರೂ ಕೂಡ ಅವರು ಭಾರತದ ಸುಪುತ್ರರಾಗಿದ್ದರು; ಕಾರಣ ನಾಥುರಾಮ ಗೋಡ್ಸೆ ಇವರು ಭಾರತದಲ್ಲಿ ಜನಿಸಿದ್ದಾರೆ. ಔರಂಗಜೇಬ ಅಥವಾ ಬಾಬರ್ ನಂತೆ ನುಸೂಲುಕೊರ ಆಗಿರಲಿಲ್ಲ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಹೇಳಿಕೆ ನೀಡಿದರು. ‘ಯಾರಿಗೆ ‘ಬಾಬರನ ಸಂತತಿ’, ಅನಿಸಿಕೊಳ್ಳುವುದರಲ್ಲಿ ಧನ್ಯತೆ ಅನಿಸುತ್ತದೆ ಅವರು ಭಾರತ ಮಾತೆಯ ಸುಪುತ್ರರಾಗಲು ಸಾಧ್ಯವಿಲ್ಲ’, ಹೀಗೆ ಕೂಡ ಅವರು ಈ ಸಮಯದಲ್ಲಿ ಹೇಳಿದರು. ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರಸ್ತುತ ಛತ್ತೀಸ್ಗಡದ ಪ್ರವಾಸದಲ್ಲಿದ್ದಾರೆ. ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.

ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಸರಕಾರ ಭಯೋತ್ಪಾದನೆಗೆ ಸೊಪ್ಪು ಹಾಕುತ್ತಿದೆ !

ಗಿರಿರಾಜ ಸಿಂಹ ಮಾತು ಮುಂದುವರೆಸಿ, ಛತ್ತೀಸ್ಗಡದಲ್ಲಿ ಭಾಜಪ ಸರಕಾರ ಬಂದರೆ ನಾವು ಮತಾಂತರ ವಿರೋಧಿ ಕಠಿಣ ಕಾನೂನು ಜಾರಿಗೊಳಿಸಿ ಕಾನೂನಿನ ಮಿತಿಯಲ್ಲಿ ಯಾರಿಗೆ ಮತಾಂತರ ಮಾಡುವುದಿದೆ ಆ ವ್ಯಕ್ತಿ ಮತಾಂತರ ಮಾಡಬಹುದು; ಆದರೆ ಬಲವಂತವಾಗಿ, ಆಮಿಷ ಒಡ್ಡಿ ಮತಾಂತರ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆವು. ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಸರಕಾರ ಭಯೋತ್ಪಾದನೆಗೆ ಸೊಪ್ಪು ಹಾಕಿತ್ತಿದೆ. ಹಾಗೂ ಜನರಿಗೆ ಮತಾಂತರಕ್ಕಾಗಿ ಅನಿವಾರ್ಯಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.