ಕರ್ನಾಟಕ ಫಲಿತಾಂಶದ ಭವಿಷ್ಯ ನಿಜವಾಯಿತು ! – ಖ್ಯಾತ ಜ್ಯೋತಿಷಿ ಸಿದ್ಧೇಶ್ವರ ಮಾರಟಕರ್

ಖ್ಯಾತ ಜ್ಯೋತಿಷಿ ಸಿದ್ಧೇಶ್ವರ ಮಾರಟಕರ್

ಪುಣೆ – ಮೇ ೧೩ ರಂದು ಪುಣೆಯಲ್ಲಿ ಪತ್ರಿಕೆಯ ಮೂಲಕ ಕರ್ನಾಟಕದ ಫಲಿತಾಂಶದ ಭವಿಷ್ಯ ನಿಜವಾಗಿದೆ ಎಂದು ಜ್ಯೋತಿಷಿ ಸಿದ್ಧೇಶ್ವರ ಮಾರಟಕರ್ ಅವರು ಹೇಳಿದ್ದಾರೆ. ‘ಜ್ಯೋತಿಷ್ ಜ್ಞಾನ್’ ಜ್ಯೋತಿಷ್ಯಕ್ಕೆ ಮೀಸಲಾದ ಪತ್ರಿಕೆಯಾಗಿದೆ. ಸಿದ್ಧೇಶ್ವರ ಮಾರಟಕರ್ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ. ’ಜ್ಯೋತಿಷ್ ಜ್ಞಾನ್’ ನಿಯತಕಾಲಿಕೆಯಲ್ಲಿ ಜನವರಿ ೨೦೨೨ ರಿಂದ ಸೆಪ್ಟೆಂಬರ್ ೨೦೨೨ ರ ಸಂಚಿಕೆಯಲ್ಲಿ ಅವರು ಮಹಾರಾಷ್ಟ್ರದ ಅಧಿಕಾರದ ಹೋರಾಟದ ಬಗ್ಗೆ ಹಾಗೂ ೨೦೨೨ ರ ದೀಪಾವಳಿ ಸಂಚಿಕೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ’ಕರ್ನಾಟಕದಲ್ಲಿ ಆಡಳಿತ ಪಕ್ಷಕ್ಕೆ ಪ್ರತಿಕೂಲ ಕಾಲ ಬರಲಿದೆ, ಅಧಿಕಾರ ಬದಲಾವಣೆ ಆಗಲಿದೆ’ ಎಂದು ಹೇಳಿದ್ದರು.

‘ಮಹಾರಾಷ್ಟ್ರದಲ್ಲಿ ಈಗಿನ ಸರಕಾರದ ಕಾಲ ಬಂದಿತ್ತು; ಆದರೆ ಸಮಯ ಬಂದಿರಲಿಲ್ಲ. ನ್ಯಾಯಾಲಯದ ತೀರ್ಪು ಶಿಂಧೆ-ಫಡ್ನವೀಸ್ ಅವರ ಪರವಾಗಿ ಬರಲಿದ್ದು, ಅಮಾನತು ನಿರ್ಧಾರವನ್ನು ವಿಧಾನಸಭಾಧ್ಯಕ್ಷರಿಗೆ ಹಸ್ತಾಂತರಿಸಲಾಗುವುದು’ ಎಂದು ಮಾರಟಕರ ಅವರು ಮಹಾರಾಷ್ಟ್ರದ ಅಧಿಕಾರದ ಹೋರಾಟದ ಬಗ್ಗೆ ಭವಿಷ್ಯ ನುಡಿದಿದ್ದರು. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಬಗ್ಗೆ ಎರಡೂ ಭವಿಷ್ಯಗಳು ನಿಜವಾಗಿವೆ ಎಂದು ಮಾರಟಕರ ಅವರು ಹೇಳಿದರು.

ಸಂಪಾದಕೀಯ ನಿಲುವು

ಜೋತಿಷ್ಯಯೆಂಬುದು ಮೂಢನಂಬಿಕೆ ಎಂದು ಹೇಳುವವರಿಗೆ ದೊಡ್ಡ ಕಪಾಳಮೋಕ್ಷ ! ಜ್ಯೋತಿಷ್ಯದ ಸತ್ಯ ಮತ್ತೆ ಮತ್ತೆ ಸಾಬೀತಾಗುತ್ತಿರುವಾಗಲೇ ಅಂಧ ಶ್ರದ್ಧಾ ನಿರ್ಮೂಲನ ಸಮಿತಿಯಂತಹ ನಾಸ್ತಿಕ ಸಂಘಟನೆಗಳು ಅದನ್ನು ಎಂದೂ ಒಪ್ಪಿಕೊಳ್ಳದೆ ಸವಾಲು ಹಾಕುತ್ತಿವೆ !