ಮದುವೆಯಾಗುವುದು ಅಥವಾ ಆಗದಿರುವುದಕ್ಕಿಂತ ಆನಂದದಲ್ಲಿರುವುದು ಹೆಚ್ಚು ಆವಶ್ಯಕವಾಗಿದೆ. ! – ಶ್ರೀ ಶ್ರೀ ರವಿಶಂಕರ

ನಟಿ ಪ್ರಾಜಕ್ತಾ ಮಾಳಿ ಮತ್ತು ಶ್ರೀ ಶ್ರೀ ರವಿಶಂಕರ

ನಟಿ ಪ್ರಾಜಕ್ತಾ ಮಾಳಿ ಇವರು ಶ್ರೀ ಶ್ರೀ ರವಿಶಂಕರ ಇವರ ಬೆಂಗಳೂರಿನ ಆಶ್ರಮದಲ್ಲಿ ತಂಗಿದ್ದರು. ಅಲ್ಲಿ ಅವರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಾವಿಕರ ಮುಂದೆ ಶ್ರೀ ಶ್ರೀ ರವಿಶಂಕರ ಅವರಿಗೆ ಕೇಳಿದರು, ‘ಮದುವೆ ಮಾಡಿಕೊಳ್ಳುವುದು ನಿಜವಾಗಿಯೂ ಅವಶ್ಯಕವಾಗಿದೆಯಾ ?’ ಅದಕ್ಕೆ ಅವರು ಕೊಟ್ಟ ಉತ್ತರ ಬಹಳ ಸುಂದರ ಮತ್ತು ಪ್ರತಿಯೊಬ್ಬರೂ ಅವಶ್ಯವಾಗಿ ಕೇಳಲೇ ಬೇಕಾದಂತಿದೆ.

ಶ್ರೀ ಶ್ರೀ ರವಿಶಂಕರ ಇವರು ಉತ್ತರಿಸುತ್ತಾ, “ನೀವು ನನಗೆ ಈ ಪ್ರಶ್ನೆ ಕೇಳುತ್ತಿದ್ದೀರಿ ? ಹಾಗಿದ್ದರೆ, ನನ್ನ ಪಕ್ಕದಲ್ಲಿ ಇನ್ನೊಂದು ಖುರ್ಚಿ ಇಡುತ್ತಿದ್ದರು. ಮದುವೆ ಮಾಡಿಕೊಳ್ಳಲೇ ಬೇಕು, ಎಂಬುದರ ಯಾವುದೇ ಅವಶ್ಯಕತೆ ಇಲ್ಲ. ಆನಂದದಲ್ಲಿರುವುದು ಹೆಚ್ಚು ಅವಶ್ಯಕವಾಗಿದೆ. ಹಾಗಾಗಿ ನೀವು ಜೀವನದಲ್ಲಿ ಆನಂದದಿಂದ ಹೇಗಿರಬೇಕು, ಇದರ ಬಗ್ಗೆ ವಿಚಾರ ಮಾಡಿ. ಪ್ರತಿಯೊಬ್ಬ ವ್ಯಕ್ತಿಯ ಆನಂದವು ಬೇರೆಬೇರೆಯಾಗಿರುತ್ತದೆ. ಕೆಲವರು ಮದುವೆ ಮಾಡಿಕೊಂಡು ದುಃಖದಲ್ಲಿರುತ್ತಾರೆ, ಮತ್ತೆ ಕೆಲವರು ಮದುವೆ ಮಾಡಿಕೊಳ್ಳದೇ ದುಃಖಿದಲ್ಲಿರುತ್ತಾರೆ. ಇನ್ನು ಕೆಲವರು ಮದುವೆ ಮಾಡಿಕೊಳ್ಳದೇ ಮತ್ತು ಮದುವೆ ಮಾಡಿಕೊಂಡು ಸಂತೋಷವಾಗಿರುತ್ತಾರೆ. ಇತರರಿಗೂ ಅವರು ಆನಂದ ಕೊಡುತ್ತಿರುತ್ತಾರೆ. ನಿಮಗೇನು ಇಷ್ಟವಾಗುತ್ತದೆ ? ನನಗನಿಸುತ್ತದೆ, ಎಲ್ಲರೂ ಆನಂದದಲ್ಲಿರುವ ಪರ್ಯಾಯವನ್ನು ಆಯ್ಕೆ ಮಾಡಬೇಕು. ನೀವು ಯಾವ ಪರಿಸ್ಥಿತಿಯಲ್ಲಿ ಆನಂದದಲ್ಲಿರುತ್ತೀರೋ ಆ ಪರಿಸ್ಥಿತಿಯನ್ನು ಸ್ವೀಕರಿಸಿರಿ”, ಎಂದರು.

(ಆಧಾರ : ದೈನಿಕ ‘ಮಹಾರಾಷ್ಟ್ರ ಟೈಮ್ಸ್’, ೨೩.೨.೨೦೨೩)