ಕೇರಳದಲ್ಲಿ ಪ್ರಯಾಣಿಕನು ರೈಲಿಗೆ ಬೆಂಕಿ ಹಚ್ಚಿದ್ದರಿಂದ ೩ ಪ್ರಯಾಣಿಕರ ಸಾವು, ೯ ಮಂದಿಗೆ ಗಾಯ

ಕೋಳಿಕೋಡ್ (ಕೇರಳ) – ಇಲ್ಲಿಯ ಅಲಾಪ್ಪುಝಾ-ಕನ್ನೂರು ಎಕ್ಸಿಟಿವ್ಹ ಎಕ್ಸ್‌ಪ್ರೆಸ್‌ನಲ್ಲಾದ ವಿವಾದದ ಹಿನ್ನೆಲೆಯಲ್ಲಿ ಪ್ರಯಾಣಿಕರೊಬ್ಬರು ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದು, ೯ ಪ್ರಯಾಣಿಕರು ಗಾಯಗೊಂಡಿದ್ದಾರೆ. ಏಪ್ರಿಲ್ ೨ ರಂದು ರಾತ್ರಿ ಈ ಘಟನೆ ನಡೆದಿದೆ. ಈ ಘಟನೆಯ ನಂತರ ರೈಲು ಕೋಳಿಕೋಡ್ ನಗರದ ಬಳಿ ಕೊರಾಪುಝಾ ರೈಲ್ವೆ ಸೇತುವೆಗೆ ಬಂದಾಗ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿದರು ಮತ್ತು ಈ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ರೈಲಿಗೆ ಬೆಂಕಿ ಹಚ್ಚಿದ ಆರೋಪಿ ನಾಪತ್ತೆಯಾಗಿದ್ದು, ಬೆಂಕಿ ಹಚ್ಚಿದ ಬೋಗಿಯಿಂದ ಒಂದು ಮಹಿಳೆಯೂ ನಾಪತ್ತೆಯಾಗಿದ್ದಾಳೆ. ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.