ಉತ್ತರ ಪ್ರದೇಶದಲ್ಲಿ ಮಾಂಸ ವ್ಯಾಪಾರಿ ಕುರೇಶಿಯ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ದಾಳಿ

1 ಸಾವಿರ 200 ಕೋಟಿ ರೂಪಾಯಿಗಳ ತೆರಿಗೆಯನ್ನು ತಪ್ಪಿಸಿರುವ ಆರೋಪ

ಬರೇಲಿ(ಉತ್ತರಪ್ರದೇಶ)- ಇಲ್ಲಿಯ ಮಾಂಸ ವ್ಯಾಪಾರಿ ಹಾಜಿ ಶಕೀಲ ಕುರೇಶಿಯವರ ಲಕ್ಷ್ಮಣಪುರಿ, ಬರೇಲಿ ಮತ್ತು ಉನ್ನಾವ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ಮಾಡಿತು. 1 ಸಾವಿರ 200 ಕೋಟಿ ರೂಪಾಯಿಗಳ ಆದಾಯ ತೆರಿಗೆಯನ್ನು ಪಾವತಿಸದೇ ಇರುವ ಪ್ರಕರಣದಲ್ಲಿ ದಾಳಿ ಹಾಕಲಾಯಿತು. ಆದಾರ ತೆರಿಗೆ ವಿಭಾಗವು 3 ದಿನಗಳ ವರೆಗೆ ನಡೆಸಲಾಗಿದ್ದ ವಿಚಾರಣೆಯಲ್ಲಿ ಸುಮಾರು 1 ಸಾವಿರ ಕೋಟಿ ರೂಪಾಯಿಗಳ ಅನಧಿಕೃತ ವ್ಯವಹಾರದ ವಿಷಯದಲ್ಲಿ ದಾಖಲೆಗಳು ಸಿಕ್ಕಿವೆ.