
ಹೃಷಿಕೇಶ್ – ಜಿಲ್ಲೆಯಲ್ಲಿ ಒಂದು ರೆಸಾರ್ಟ್ನಿಂದ ನಾಪತ್ತೆ ಆಗಿರುವ ೧೯ ವರ್ಷದ ‘ರೇಸೆಪ್ಶನಿಸ್ಟ’ ಅಂಕಿತಾ ಭಂಡಾರಿ ಇವಳ ಮೃತ ದೇಹ ಉತ್ತರಖಂಡ ಪೊಲೀಸರಿಗೆ ‘ಚ್ಚಿಲ್ಲಾ ಪವರ್ ಹೌಸ್’ ಹತ್ತಿರದ ಕಾಲುವೆಯಲ್ಲಿ ದೊರೆತಿದೆ. ಅಂಕಿತ ಭಂಡಾರಿ ಸಪ್ಟೆಂಬರ್ ೧೮ ರಂದು ನಾಪತ್ತೆ ಆಗಿದ್ದಳು. ಈ ಪ್ರಕರಣದಲ್ಲಿ ಭಾಜಪದ ಮುಖಂಡ ವಿನೋದ ಆರ್ಯ ಇವರ ಪುತ್ರ ಪುಲಕಿತ ಆರ್ಯ ಸಹಿತ ೩ ಜನರನ್ನು ಬಂಧಿಸಲಾಗಿದೆ. ವೈಯಕ್ತಿಕ ವಿವಾದಗಳ ನಂತರ ಯುವತಿಯನ್ನು ರೆಸಾರ್ಟ್ ಹತ್ತಿರದ ಕಾಲುವೆಗೆ ತಳ್ಳಿರುವುದೆಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಂಕಿತಾ ಭಂಡಾರಿ ಈಕೆಯನ್ನು ಅಪರಾಧಿಗಳು ವೇಶ್ಯಾವಾಟಿಕೆಯಲ್ಲಿ ತಳ್ಳಲು ಪ್ರಯತ್ನಿಸುತ್ತಿದ್ದರು; ಆದರೆ ಆಕೆ ವಿರೋಧಿಸಿರುವುದರಿಂದ ಆಕೆಯ ಹತ್ಯೆ ಮಾಡಲಾಯಿತು. ‘ರೆಸಾರ್ಟಿ’ನ ಮಾಲೀಕ ಪುಲಕಿತ ಆರ್ಯ, ವ್ಯವಸ್ಥಾಪಕ ಸೌರಭ ಭಾಸ್ಕರ್ ಮತ್ತು ಸಹ ವ್ಯವಸ್ತಾಪಕ ಅಂಕಿತ ಗುಪ್ತ ಇವರ ಮೇಲೆ ಯುವತಿಯ ಹತ್ಯೆಯ ಆರೋಪವಿದೆ. ‘ಅಂಕಿತಾ ಈಕೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಹತ್ಯೆ ಮಾಡಲಾಗಿದೆ’, ಎಂದು ಅಂಕಿತಾಳ ತಂದೆ ಆರೋಪಿಸಿದ್ದಾರೆ.
Amid outrage, Uttarakhand BJP leader Vinod Arya expelled from party after son held in teen’s murder case#ankitabhandari #ANKITAMUDERCASE #Uttarakhand #PulkitArya #VinodArya https://t.co/QhbK1KQJxt
— India.com (@indiacom) September 24, 2022
೧. ಉತ್ತರಾಖಂಡದಲ್ಲಿನ ಪೌರಿ ಇಲ್ಲಿ ಪುಲಕಿತ ಆರ್ಯ ಇವರ ‘ವನತಾರ’ ಎಂಬ ರೆಸಾರ್ಟ್ ಇತ್ತು. ಈ ರೆಸಾರ್ಟ್ ನಲ್ಲಿ ರಿಸೆಪ್ಶನಿಸ್ಟ ಎಂದು ಕೆಲಸ ಮಾಡುವ ಅಂಕಿತಾ ಹಟತ್ತಾಗಿ ನಾಪತ್ತೆಯಾಗಿದ್ದಳು. ಈ ವಿಷಯವಾಗಿ ಯುವತಿಯ ಕುಟುಂಬದವರು ಮತ್ತು ಪುಲಕಿತ ಆರ್ಯ ಇವರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.
೨. ಈ ಹತ್ಯೆಯ ಹಿಂದೆ ಪುಲಕಿತನ ಕೈವಾಡ ಇರುವುದು ಬೆಳಕಿಗೆ ಬಂದ ನಂತರ ರಾಜ್ಯ ಸರಕಾರದ ಆದೇಶದ ನಂತರ ‘ವನತಾರಾ’ ರೆಸಾರ್ಟ್ ನೆಲಸಮ ಮಾಡಲಾಯಿತು ಹಾಗೂ ಆಕ್ರೋಶಗೊಂಡ ಗುಂಪಿನಿಂದ ಈ ‘ರೆಸಾರ್ಟಿ’ಗೆ ನುಗ್ಗಿ ಬೆಂಕಿ ಹಚ್ಚಿದರು.
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ