ಲಿಸೆಸ್ಟರ್ (ಬ್ರಿಟನ್)ನಲ್ಲಿ ಪಾಕಿಸ್ತಾನಿ ಮುಸಲ್ಮಾನರ ಹಿಂಸಾಚಾರದಿಂದ ಹಿಂದೂಗಳ ಪಲಾಯನ !

ಭಯದ ಕರಿನೆರಳಿನಲ್ಲಿರುವ ಹಿಂದೂಗಳು ಮನೆಯಲ್ಲಿ ಕೂಡ ಧಾರ್ಮಿಕ ಚಿಹ್ನೆಗಳನ್ನು ಹಾಕಲು ಹೆದರುತ್ತಿದ್ದಾರೆ !

ಲಿಸೇಸ್ಟರ್(ಬ್ರಿಟನ್) – ನಗರದಲ್ಲಿ ಪಾಕಿಸ್ತಾನಿ ಮುಸಲ್ಮಾನರಿಂದ ಹಿಂದೂ ಮತ್ತು ಅವರ ದೇವಸ್ಥಾನಗಳ ಮೇಲೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದಾಳಿಯಿಂದ ಅಲ್ಲಿಯ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ೯ ಹಿಂದೂ ಕುಟುಂಬಗಳು ಈ ನಗರದಿಂದ ಪಲಾಯನ ಮಾಡಿದ್ದಾರೆ. ಕಟ್ಟರವಾದಿ ಮುಸಲ್ಮಾನರ ಮೇಲಿನ ಭಯದಿಂದ ಅಲ್ಲಿಯ ಹಿಂದೂಗಳು ತಮ್ಮ ಮನೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಹಾಕುತ್ತಿಲ್ಲ, ಎಂದು ‘ಹೇನರಿ ಜಾಕ್ಸನ್ ರಿಸರ್ಚ್’ನ ‘ಫೆಲೋ’ ಶಾರ್ಲೋಟ ಲಿಟಲ್‌ವುಡ್ ಇವರು ಒಂದು ವಾರ್ತಾ ವಾಹಿನಿಯ ಪ್ರತಿನಿಧಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. (ಇದು ಒಂದು ವಿದೇಶಿ ಮಹಿಳೆಯಿಂದ ಹಿಂದೂಗಳಿಗೆ ತಿಳಿಯುತ್ತದೆ, ಇದು ಬ್ರಿಟನ್‌ನಲ್ಲಿರುವ ಹಿಂದೂಗಳಿಗೆ ಲಚ್ಚಸ್ಪದ ! – ಸಂಪಾದಕರು)

‘ಕಾಶ್ಮೀರದಂತೆ ನಾಯಿಗಳನ್ನು (ಹಿಂದೂಗಳನ್ನು) ಓಡಿಸಿರಿ !’ – (ಅಂತೆ) – ಮುಸಲ್ಮಾನರ ಪ್ರಚೋದನಕಾರಿ ಕರೆ

ಲಿಟಿಲ್‌ವುಡ್ ತಮ್ಮ ಮಾತು ಮುಂದುವರೆಸುತ್ತಾ, ನಾವು ಲಿಸೆಸ್ಟರ್‌ನ ರಸ್ತೆಯ ಮೇಲೆ ಹಿಂಸಾಚಾರ ನೋಡಿದೆವು. ಅದಕ್ಕಾಗಿ ಕಟ್ಟರವಾದಿಗಳಿಗೆ ಕರೆ ನೀಡಲಾಗಿತ್ತು. ೨೦೦ ಜನರು ರಸ್ತೆಗಿಳಿದ್ದಿದ್ದರು. ಅದರಲ್ಲಿನ ಅರ್ಧಕ್ಕಿಂತ ಹೆಚ್ಚಿನವರು ನಗರದ ಹೊರಗಡೆಯಿಂದ ಬಂದಿದ್ದರು. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪೋಸ್ಟಗಳು ಹಂಚಿಕೊಳ್ಳಲಾಗಿದೆ. ಇದರಲ್ಲಿ ಹಿಂದೂಗಳನ್ನು ಕತ್ತರಿಸುವುದು ಹಾಗೂ ಅವರನ್ನು ನಾಶ ಮಾಡುವುದು ಇಂತಹ ಪ್ರಚೋದನಕಾರಿ ಕರೆಗಳನ್ನು ನೀಡಲಾಗಿದೆ. ಈ ಪೋಸ್ಟ್‌ಗಳಲ್ಲಿ, ‘ಯಾವ ರೀತಿ ನಾವು ಕಾಶ್ಮೀರದಿಂದ ಹಿಂದೂಗಳನ್ನು ಮುಗಿಸಿದ್ದೇವೆ, ಅದರಂತೆ ಇಲ್ಲಿಯೂ ಮಾಡಿ. ಆ ನಾಯಿಗಳನ್ನು (ಹಿಂದೂಗಳನ್ನು) ಸೀಳಿರಿ, ಓಡಿಸಿರಿ.’ ಈ ರೀತಿಯ ಪೋಸ್ಟ್ ಮಾಡುವುದು ದುಃಖಕರವಾಗಿದೆ. ಇಸ್ಲಾಮಿ ಕಟ್ಟರವಾದಿ ಸಮುಹವು ಇದನ್ನು ಆಯೋಜನಾಬದ್ಧವಾಗಿ ಮಾಡಿದ್ದಾರೆ. ಅದರ ನೇತೃತ್ವ ಯುಟ್ಯುಬ ಮೇಲೆ ಲಕ್ಷಾಂತರ ಬೆಂಬಲಿಗರು ವಹಿಸಿದ್ದಾರೆ. ಅವರು ಮುಸಲ್ಮಾನರನ್ನು ಲಿಸೆಸ್ಟರಿಗೆ ಕರೆಸಿದ್ದರು. ಈಗ ಅವರ ಮುಂದಿನ ಗುರಿ ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಇರಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಏನು ನಡೆಯುತ್ತದೆ, ಅದೇ ಬ್ರಿಟನ್‌ನ ಒಂದು ನಗರದಲ್ಲಿ ನಡೆಯುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನು ?

ಎಲ್ಲಿಯವರೆಗೆ ಹಿಂದೂಗಳು ಧರ್ಮಕ್ಕಾಗಿ ಸಂಘಟಿತರಾಗುವುದಿಲ್ಲ, ಅಲ್ಲಿಯವರೆಗೆ ಭಾರತ ಸಹಿತ ಜಗತ್ತಿನಾದ್ಯಂತ ಹೀಗೆ ನಡೆಯುವುದೇ ಇದರಲ್ಲಿ ಆಶ್ಚರ್ಯವೇನು ಇಲ್ಲ ?