ಹಿಂದೂ ಯುವಕನು ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದ್ದನು !

ಲಖೀಮಪುರ (ಅಸ್ಸಾಂ) – ಕ್ರೈಸ್ತ ಯುವತಿಯನ್ನು ಪ್ರೇಮಿಸಿದ ಒಬ್ಬ ಹಿಂದೂ ಯುವಕನಿಗೆ ಬರ್ಬರವಾಗಿ ಹೊಡೆದು ಹತ್ಯೆಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಅಸ್ಸಾಂನ ಕೊಯಿಲಾಮಾರಿ ಬಲಿಜನ ಪ್ರದೇಶದಲ್ಲಿ ನಡೆದಿದೆ. ೨೩ ವರ್ಷದ ಹಿಂದೂ ಯುವಕ ಬಿಕಿ ಬಿಶಾಲನ ಶವ ಸೆಪ್ಟೆಂಬರ ೧೨ ರಂದು ಮರಕ್ಕೆ ನೇಣುಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಮಾನವ ಹಕ್ಕುಗಳ ಸಂಸ್ಥೆ ‘ಲಿಗಲ್ ರಾಯಿಟ್ಸ್ ಆಬ್ಝರ್ವೇಟರಿ’ ಈ ಸಂಘಟನೆಯು ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಮತ್ತು ಸ್ಥಳೀಯ ಆಡಳಿತದವರಲ್ಲಿ ವಿನಂತಿಸಿದೆ.
#Assam Hindu youth Biki Bishal pulled out of home n killed for marrying #Christian girl n refusing to get convert at Koilamari Balijan- Johing, Lakhimpur @lakhimpurpolice! Mob of 1000 plus goons mobilized by 4 #Baptist Churches in locality! @assampolice @himantabiswa @AssamCid pic.twitter.com/ejc8bngc4i
— Legal Rights Observatory- LRO (@LegalLro) September 14, 2022
೧. ಬಿಕಿ ಬಿಶಾಲ ಮತ್ತು ಕ್ರೈಸ್ತ ಯುವತಿ ಪರಸ್ಪರ ಪ್ರೇಮಿಸುತ್ತಿದ್ದರು. ಅವಳು ಬಿಕಿಯ ಜೊತೆಯಲ್ಲಿರಲು ಹೋಗಿದ್ದಳು. ಈ ವಿಷಯವು ಆ ಪರಿಸರದ ಚರ್ಚ್ನ ೪ ಕಾರ್ಯಕರ್ತರಿಗೆ ತಿಳಿದಾಗ ಅವರು ಬಿಕಿಯ ಮನೆಯ ಹೊರಗೆ ಒಟ್ಟಾದರು.
೨. ಅವರು ಬಿಕಿಗೆ ‘ಇದರ ಗಂಭೀರ ಪರಿಣಾಮವನ್ನು ಭೋಗಿಸಬೇಕಾಗುವುದು’, ಎಂದು ಬೆದರಿಸಿದ್ದರು. ಅವರು ಯುವತಿಯನ್ನು ಅವನ ಮನೆಯಿಂದ ಹೊರಗೆ ತೆಗೆದರು ಹಾಗೂ ಬಿಕಿಗೆ ‘ಕ್ರೈಸ್ತ ಧರ್ಮವನ್ನು ಸ್ವೀಕರಿಸು ಇಲ್ಲದಿದ್ದರೆ ಈ ಯುವತಿಯೊಂದಿಗಿನ ಸಂಬಂಧವನ್ನು ಬಿಟ್ಟುಬಿಡು.’ ಎಂದು ಹೇಳಿದರು.
೩. ಬಿಕಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದಾಗ ಕ್ರೈಸ್ತ ಕಾರ್ಯಕರ್ತರು ಬಿಕಿಯನ್ನು ಮನೆಯಿಂದ ಎಳೆದು ಹೊರಗೆ ತಂದು ಅವನಿಗೆ ಯದ್ವಾತದ್ವ ಹೊಡೆದು ಕೊಲೆ ಮಾಡಿದರು ಹಾಗೂ ನಂತರ ಮರಕ್ಕೆ ನೇತಾಡಿಸಿದರು.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !