ಮುಝಫ್ಫರನಗರ (ಉತ್ತರಪ್ರದೇಶ)ದ ಮತಾಂಧರಿಂದ ಮನೆಯೊಳಗೆ ನುಗ್ಗಿ ಹಿಂದೂ ಕುಟುಂಬದ ಸದಸ್ಯರ ಥಳಿತ

 ಹಿಂದೂ ಕುಟುಂಬವು ಮನೆಯನ್ನು ಮಾರಿ ಓಡಿಹೋಗುವ ಸಿದ್ಧತೆಯಲ್ಲಿ !

* ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ. ಸರಕಾರವು ತಕ್ಷಣ ಈ ಹಿಂದೂಗಳಿಗೆ ಸಂರಕ್ಷಣೆ ನೀಡಬೇಕು.- ಸಂಪಾದಕರು 

( ಪ್ರಾತಿನಿಧಿಕ ಛಾಯಾಚಿತ್ರ )

ಮುಝಫ್ಫರನಗರ (ಉತ್ತರಪ್ರದೇಶ) – ಇಲ್ಲಿನ ಸುಭಾಷನಗರ ಪ್ರದೇಶದಲ್ಲಿ ಒಂದು ಕ್ಷುಲ್ಲಕ ಘಟನೆಯಿಂದ ಮತಾಂಧರು ಮನೆಯೊಳಗೆ ನುಗ್ಗಿ ಒಂದು ಹಿಂದೂ ಕುಟುಂಬದ ಸದಸ್ಯರನ್ನು ಥಳಿಸಿದ್ದಾರೆ. ಇದರಿಂದಾಗಿ ಈ ಕುಟುಂಬವು ಮನೆ ಮಾರಿ ಬೇರೆ ಕಡೆಗೆ ಹೋಗುವ ಬಗ್ಗೆ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗಿದೆ. ಈ ಕುಟುಂಬದವರು `ಈ ಪ್ರಕರಣದಲ್ಲಿ ಪೊಲೀಸರು ಮತಾಂಧರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

ಹಿಂದೂ ಕುಟುಂಬದ ಸೋನಿಯಾರವರು, ಶಾಹರೂಖ, ಫೈಜ, ನೋನೂ, ತಾಜ, ಮತ್ತು ನಾಝ ಇವರ ವಿರುದ್ಧ ದೂರನ್ನು ದಾಖಲಿಸಲಾಗಿದೆ, ಆದರೆ ಇಲ್ಲಿಯವರೆಗೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೊಂದೆಡೆ ಪೊಲೀಸರು ತಾಜ ಮತ್ತು ನಾಝರನ್ನು ಬಂಧಿಸಲಾಗಿದೆ, ಉಳಿದ 3 ಜನರನ್ನು ತಕ್ಷಣ ಬಂಧಿಸಲಾಗುವುದು ಎಂದು ಹೇಳಿದರು.