ದೆಹಲಿಯಲ್ಲಿ ಹಿಂದೂ ವ್ಯಕ್ತಿಯ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಮತಾಂಧನು ಸೆರೆಮನೆಯಿಂದ ಹೊರಬಂದ ನಂತರ ಆ ಹಿಂದೂ ವ್ಯಕ್ತಿಯನ್ನು ಕೊಂದನು !

ದೆಹಲಿ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ? ದೆಹಲಿಯಲ್ಲಿ ಪೊಲೀಸರು ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದರೂ ಅಲ್ಲಿ ಪೊಲೀಸರ ಭಯವಿಲ್ಲ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !- ಸಂಪಾದಕರು 

ನವ ದೆಹಲಿ : ಇಲ್ಲಿಯ ಸುಲ್ತಾನಪುರಿ ಪ್ರದೇಶದಲ್ಲಿ ಹೀರಾಲಾಲ ಗುಜರಾತಿ (ವಯಸ್ಸು ೩೮) ಎಂಬಾತನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇರ್ಫಾನ್ ಮತ್ತು ಆತನ ಸಹೋದರ ಶಾನುನನ್ನು ಬಂಧಿಸಿದ್ದಾರೆ. ಇರ್ಫಾನ ಹೀರಾಲಾಲನ ಸಹೋದರಿಯ ಮೇಲೆ ಅತ್ಯಾಚಾರ ಮಾಡಿದ್ದ. ಅದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. ಸೆರೆಮನೆಯಿಂದ ಹೊರಬಂದ ನಂತರ ಆತ ಹೀರಾಲಾಲನನ್ನು ಕೊಂದನು. ಜನವರಿ ೧೭ ರಂದು ಇರ್ಫಾನ ಮತ್ತು ಶಾನು ಇವರಿಬ್ಬರು ಹೀರಾಲಾಲ ಮತ್ತು ನರಸಿಂಹನನ್ನು ಚಾಕುವಿನಿಂದ ಹಲ್ಲೆ ನಡೆಸಿದರಲ್ಲದೇ ಗುಂಡು ಹಾರಿಸಿದ್ದರು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹಿರಾಲಾಲ ಸಾವನ್ನಪ್ಪಿದ್ದು, ನರಸಿಂಹ ಇವರ ಮೇಲೆ ಚಿಕಿತ್ಸೆ ನಡೆಯುತ್ತಿದೆ.