ಉತ್ತರಾಖಂಡದ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರ ಸಭೆಯಲ್ಲಿ ಚಾಕು ತಂದಿರುವ ಯುವಕನ ಬಂಧನ !


ನವದೆಹಲಿ – ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರು ಕಾಶಿಪುರದಲ್ಲಿನ ಒಂದು ಸಭೆಯಲ್ಲಿ ಉಪಸ್ಥಿತರಿರುವಾಗ ಓರ್ವ ತರುಣನು ಚಾಕು ಹಿಡಿದು ನೇರವಾಗಿ ಸಭಾಮಂಟಪದ ಮೇಲೆ ಬಂದಿರುವ ಘಟನೆ ನಡೆದಿದೆ. ಈ ಸಮಯದಲ್ಲಿ ಸಭಾಮಂಟಪದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಮಯೋಚಿತ ಬುದ್ಧಿಯನ್ನು ಪ್ರದರ್ಶಿಸಿ ಆ ತರುಣನನ್ನು ಹಿಡಿದು ಅವನ ಕೈಯಿಂದ ಚಾಕುವನ್ನು ಕಸಿದುಕೊಂಡಿದ್ದರಿಂದ ದೊಡ್ಡ ಘಟನೆಯು ದೂರವಾಯಿತು. ಈ ತರುಣನು ಸಭಾಮಂಟಪದ ಮೇಲೆ ತಲುಪಿದಾಗ ಮೊದಲಿಗೆ ಅವನು ಮೈಕ್ ನಿಂದ ‘ ಜಯ ಶ್ರೀ ರಾಮ ‘ ಎಂಬ ಘೋಷಣೆ ನೀಡಿದನು. ಆದುದರಿಂದ ಕಾಂಗ್ರೆಸ್ ಕಾರ್ಯಕರ್ತರು ಈ ತರುಣನನ್ನು ತಡೆದಾಗ ಅವನು ತನ್ನ ಬಳಿ ಇದ್ದ ಚಾಕುವನ್ನು ಹೊರತೆಗೆದನು. ಪೊಲೀಸರು ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.