ಭ್ರಷ್ಟಾಚಾರ ಮತ್ತು ಮದ್ಯ ಮಾರಾಟದ ಬಗ್ಗೆ ದೂರನ್ನು ನೀಡುವ ‘ಮಾಹಿತಿ ಅಧಿಕಾರಿ’ ಕಾರ್ಯಕರ್ತನ ಕೈಕಾಲುಗಳನ್ನು ಕತ್ತರಿಸಿದ ಗೂಂಡಾಗಳು !

  • ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಸರಕಾರ ಇರುವುದರಿಂದ ಅಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಹೀಗೆ ಇರುವುದು, ಇದು ಜನರಿಗೆ ತಿಳಿದಿದೆ. ಆದ್ದರಿಂದ ಅನ್ಯ ರಾಜ್ಯಗಳಿಂದ ಕಾಂಗ್ರೆಸ್‌ನನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ.
  • ಕಾಂಗ್ರೆಸ್‌ನ ರಾಜ್ಯಗಳಲ್ಲಿ ಭ್ರಷ್ಟಾಚಾರ ಮತ್ತು ಮದ್ಯಮಾರಾಟ ಇದರ ಮಾಹಿತಿ ನೀಡುವವರ ಸ್ಥಿತಿ ಹೀಗಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಈ ರೀತಿಯ ಅಮಾನವಿಯ ದೌರ್ಜನ್ಯ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !

ಬಾಡಮೇರ(ರಾಜಸ್ಥಾನ) – ಇಲ್ಲಿ ಕೆಲವು ಗೂಂಡಾಗಳು ಅಮರಾರಾಮ ಗೊದಾರಾ ಈ ೩೦ ವರ್ಷದ ಮಾಹಿತಿ ಅಧಿಕಾರ ಕಾರ್ಯಕರ್ತನನ್ನು ಅಪಹರಿಸಿ ಅವನ ಕೈ ಕಾಲುಗಳನ್ನು ಮುರಿದರು. ನಂತರ ಅವರ ಕಾಲಿನಲ್ಲಿ ಕಬ್ಬಣದ ಸಲಾಕೆ ಮತ್ತು ಮೊಳೆಯನ್ನೂ ಹೊಡೆಯಲಾಗಿದೆ. ಗೋದಾರಾ ಇವರು ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಮದ್ಯ ಮಾರಾಟ ಈ ವಿಷಯವಾಗಿ ದೂರಿದ್ದರು. ಆದ್ದರಿಂದ ಅವರ ಮೇಲೆ ಆಕ್ರಮಣ ನಡೆದಿದೆ. ಅಮರಾರಾಮ ಗೋದಾರಾ ಇವರ ಮೇಲೆ ಜೋಧಪೂರ ಇಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಜೋಧಪೂರದಿಂದ ಮನೆಗೆ ಹಿಂತಿರುಗುವಾಗ ಗೋದಾರಾ ಬಸ್ಸಿನಿಂದ ಇಳಿಯುವಾಗ ಮುಸುಕುಧಾರಿ ೮ ಗೂಂಡಾಗಳು ಚತುಶ್ಚಕ್ರ ವಾಹನದಲ್ಲಿ ಅಪಹರಿಸಿದ್ದರು.