2016 ರಲ್ಲೂ ನಡೆದಿತ್ತು ದಾಳಿ !
‘ಭಯೋತ್ಪಾದಕರ ನಿರ್ಮಾಣಕೇಂದ್ರವಾಗಿರುವ ಪಾಕಿಸ್ತಾನವನ್ನು ನಾಶಪಡಿಸಿದರೆ ಮಾತ್ರ ಇಂತಹ ದಾಳಿಗಳು ಶಾಶ್ವತವಾಗಿ ನಿಲ್ಲುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಈಗಲಾದರೂ ಭಯೋತ್ಪಾದಕರನ್ನು ನಿರ್ನಾಮ ಮಾಡಬೇಕೆಂದು ಜನರ ಅಪೇಕ್ಷೆಯಾಗಿದೆ !- ಸಂಪಾದಕರು

ಪಠಾಣಕೋಟ (ಪಂಜಾಬ) – ಇಲ್ಲಿನ ಸೇನಾ ನೆಲೆಯ ಪ್ರವೇಶದ್ವಾರದಲ್ಲಿ ಉಗ್ರರು ಗ್ರೆನೇಡ್ ಸ್ಫೋಟಿಸಿದ್ದಾರೆ. ಇದರಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದ್ವಿಚಕ್ರ ವಾಹನದಿಂದ ಬಂದಿದ್ದ ಉಗ್ರರು ಪ್ರವೇಶ ದ್ವಾರದಲ್ಲಿ ಗ್ರೆನೇಡ್ ಎಸೆದಿದ್ದಾರೆ. ಈ ಸಮಯದಲ್ಲಿ ಒಂದು ದಿಬ್ಬಣವು ಪ್ರವೇಶದ್ವಾರದಿಂದ ಹಾದು ಹೋಗುತ್ತಿತ್ತು. `ಸಿಸಿಟಿವಿ ದೃಶ್ಯಾವಳಿ’ಗಳ ಆಧಾರದಿಂದ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಪ್ರದೇಶವು ವಾಯು ಸೇನೆಯ ನೆಲೆ, ಸೇನೆಯ ಮದ್ದುಗುಂಡುಗಳ ಡಿಪೋ ಮತ್ತು ಸೇನೆಯ ಬೆಟಾಲಿಯನ್ ಬೇಸ್ನ ನೆಲೆಯಾಗಿದೆ. 2016ರ ಜನವರಿಯಲ್ಲಿ ಜಿಹಾದಿ ಭಯೋತ್ಪಾದಕರು ವಾಯುನೆಲೆಯ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ಎಂಟು ಯೋಧರು ಹುತಾತ್ಮರಾಗಿದ್ದು, ಐವರು ಉಗ್ರರು ಸಾವನ್ನಪ್ಪಿದ್ದರು.
#Punjab: Grenade blast reported near Triveni Gate of an Army camp in Pathankot. Police is investigating the CCTV footage.
Gurpreet with more details. pic.twitter.com/vbJtEuRQNv
— TIMES NOW (@TimesNow) November 22, 2021
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!