ನಟಿ ಸಾರಾ ಅಲಿ ಖಾನ್ ಮುಸಲ್ಮಾನರಾಗಿ ಕೇದಾರನಾಥ ದೇವಾಲಯಕ್ಕೆ ಹೋಗಿ ದರ್ಶನ ಪಡೆದುಕೊಂಡಿದ್ದರಿಂದ ಟೀಕೆ

ಸರ್ವಧರ್ಮಸಮಭಾವ ಮತ್ತು ಜಾತ್ಯತೀತವು ಕೇವಲ ಹಿಂದೂಗಳಷ್ಟೇ ಜೋಪಾನ ಮಾಡಬೇಕು, ಬೇರೆಯವರು ತಮ್ಮ ಧರ್ಮವನ್ನು ಮತಾಂಧರಾಗಿ ಪಾಲಿಸಬೇಕೆಂದರೆ, ಕಳೆದ ೭೪ ವರ್ಷಗಳಿಂದ ಭಾರತದಲ್ಲಿ ಏನೆಲ್ಲಾ ನಡೆಯುತ್ತಿದೆಯೋ, ಅದು ಇನ್ನೂ ಹಿಂದೂಗಳ ಗಮನಕ್ಕೆ ಬರುತ್ತಿಲ್ಲ, ಎಂಬುದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !- ಸಂಪಾದಕರು

ನಟಿ ಸಾರಾ ಅಲೀ ಖಾನ ಮತ್ತು ಜಾನ್ಹವೀ ಕಪೂರ

ಮುಂಬೈ – ನಟಿ ಸಾರಾ ಅಲೀ ಖಾನ ಮತ್ತು ಜಾನ್ಹವೀ ಕಪೂರ ಇವರಿಬ್ಬರೂ ಉತ್ತರಾಖಂಡದಲ್ಲಿನ ಕೇದಾರನಾಥದಲ್ಲಿನ ದೇವಾಲಯಕ್ಕೆ ಹೋಗಿ ದರ್ಶನ ಪಡೆದುಕೊಂಡರು. ಅನಂತರ ಕೆಲವು ಮತಾಂಧರು ಸಾಮಾಜಿಕ ಮಾಧ್ಯಮದಿಂದ ಸಾರಾ ಅಲೀ ಖಾನರವರನ್ನು ‘ಟ್ರೋಲ್’ (ಸಾಮಾಜಿಕ ಮಾಧ್ಯಮಗಳ ಮೂಲಕ ವಿರೋಧಿಸುವುದು ಅಥವಾ ಟೀಕಿಸುವುದು) ಮಾಡಿದ್ದರು. ಸಾರಾರವರು ಕೇದಾರನಾಥ ದೇವಾಲಯದ ಬಳಿಯ ಕೆಲವು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರು. ಅನಂತರ ಅವಳನ್ನು ‘ಟ್ರೋಲ್’ ಮಾಡಲಾಯಿತು. ಈ ಬಗ್ಗೆ ಒಬ್ಬನು ಟೀಕಿಸುತ್ತಾ, ‘ನಿನಗೆ ನಾಚಿಕೆಯಾಗಬೇಕು. ನೀನೊಬ್ಬ ಮುಸಲ್ಮಾನಳಾಗಿ ಹಿಂದೂಗಳ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಿ’ ಎಂದು ಹೇಳಿದ್ದಾನೆ.