ಢೋಂಗೀ ಜಾತ್ಯತೀತತೆಯು ಭಾರತವನ್ನು ನಾಶ ಮಾಡಬಹುದು ! – ಕೇರಳದ ಬಿಷಪ್ ಜೋಸೆಫ ಕಲ್ಲಾರಂಗಟ

ಓರ್ವ ಬಿಷಪಗೆ ತಿಳಿಯುವ ವಿಷಯ ತಥಾಕಥಿತ ಜಾತ್ಯತೀತರು ಹಾಗೂ ಪ್ರಗತಿ(ಅಧೋಗತಿ)ಪರರಿಗೆ ಏಕೆ ತಿಳಿಯಲ್ಲ ?

ತಿರುವನಂತಪುರಮ್ (ಕೇರಳ) – ಜಾತ್ಯತೀತ ಇದು ಭಾರತದ ಮೂಲವಾಗಿದೆ; ಆದರೆ ಢೋಂಗಿ ಜಾತ್ಯತೀತವು ಭಾರತವನ್ನು ನಾಶ ಮಾಡಬಹುದು. ಜಾತ್ಯತೀತದಿಂದ ಯಾರಿಗೆ ನಿಜವಾದ ಲಾಭವಾಗುತ್ತದೆ, ಎಂಬ ಬಗ್ಗೆ ಈಗ ಪ್ರಶ್ನೆಗಳು ಹುಟ್ಟುತ್ತಿವೆ, ಎಂದು ಕೇರಳದ ಸಾಯರೊ-ಮಲಬಾರ ಕ್ಯಾಥೊಲಿಕ್ ಚರ್ಚ್‌ನ ಪಾಲಾ ಡಾಯಸೀಜನ ಬಿಷಪ್ ಜೋಸೆಫ ಕಲ್ಲಾರಂಗಟರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚರ್ಚ್‌ಗೆ ಸಂಬಂಧಪಟ್ಟ ದಿನಪತ್ರಿಕೆ ‘ದೀಪಿಕಾ’ದಲ್ಲಿ ಅವರು ಒಂದು ಲೇಖನದಲ್ಲಿ ತಮ್ಮ ಈ ಅಭಿಪ್ರಾಯವನ್ನು ಮಂಡಿಸಿದರು. ಕಳೆದ ತಿಂಗಳಿನಲ್ಲಿ ಬಿಷಪ್ ಕಲ್ಲಾಂರಂಗಟರವರು ‘ಕೇರಳದಲ್ಲಿ ಕ್ರೈಸ್ತ ಯುವತಿಯರು ‘ಲವ್ ಜಿಹಾದ್ ಹಾಗೂ ‘ನಾರ್ಕೋಟಿಕ್ಸ್ (ಅಮಲು ಪದಾರ್ಥ) ಜಿಹಾದ್ಗೆ ಬಲಿಯಾಗುತ್ತಿದ್ದಾರೆ’, ಎಂದೂ ಹೇಳಿದ್ದರು.