ರಾಹುಲ್ ಗಾಂಧಿ ಇವರ ಶ್ರೀ ವೈಷ್ಣೋದೇವಿಯ ದರ್ಶನದ ನಂತರ ‘ಭಾಜಯುಮೋ’ದಿಂದ ಗಂಗಾಜಲ ಸಿಂಪಡಿಸಿ ಯಾತ್ರಾಮಾರ್ಗದ ಶುದ್ಧೀಕರಣ

‘ಮುಂಬರುವ ಐದು ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರು ಹಿಂದೂಗಳ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆ ಮತ್ತು ನಂತರದ ಮುಂದಿನ ಐದು ವರ್ಷ ಆಕಡೆ ತಿರುಗಿಯೂ ನೋಡುವುದಿಲ್ಲ’, ಇದನ್ನು ಹಿಂದೂಗಳು ಅರೆತಿದ್ದಾರೆ ! ಇಂತಹ ‘ಢಾಂಬಿಕ’ ಭಕ್ತರಿಂದ ಹಿಂದೂಗಳು ಎಚ್ಚರದಿಂದಿರಬೇಕು !

ಶ್ರೀನಗರ – ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಶ್ರೀ ವೈಷ್ಣೋದೇವಿಯ ದರ್ಶನದ ನಂತರ ಜಮ್ಮು-ಕಾಶ್ಮೀರ್‌ದ ಭಾರತೀಯ ಜನತಾ ಯುವ ಮೋರ್ಚಾದಿಂದ (‘ಭಾಜಯುಮೊ’ನಿಂದ) ಯಾತ್ರೆಯ ಮಾರ್ಗದಲ್ಲಿ ಗಂಗಾಜಲವನ್ನು ಸಿಂಪಡಿಸಿ ಶುದ್ಧೀಕರಣ ಮಾಡಿದರು. ಭಾರತೀಯ ಜನತಾ ಯುವ ಮೋರ್ಚಾದ ಜಮ್ಮು-ಕಾಶ್ಮೀರನಲ್ಲಿನ ಮುಖ್ಯಸ್ಥ ಅರುಣ ಜಾಮವಾಲ ಇವರು ಈ ಶುದ್ಧೀಕರಣ ಪ್ರಕ್ರಿಯೆಯನ್ನು ಮಾಡಿದರು. ಕಳೆದ ವಾರ ರಾಹುಲ ಗಾಂಧಿ ಇವರು ೧೩ ಕಿ.ಮೀ. ಕಾಲ್ನಡಿಗೆ ಮಾಡಿ ಶ್ರೀ ವೈಷ್ಣೋದೇವಿಯ ದರ್ಶನವನ್ನು ಪಡೆಡಿದ್ದರು. ‘ರಾಹುಲ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶ್ರೀವೈಷ್ಣೋದೇವಿಯ ಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಅವರು ಯಾತ್ರೆಯ ಮಾರ್ಗದಲ್ಲಿ ಪಕ್ಷದ ಬಾವುಟ ಹಾರಿಸಿ ಘೋಷಣೆಗಳನ್ನು ಕೂಗಿದರು’, ಎಂದು ಭಾರತೀಯ ಜನತಾ ಯುವ ಮೋರ್ಚಾ ಆರೋಪಿಸಿದೆ.