ಜಾರ್ಖಂಡದಲ್ಲಿ ಮತಾಂತರಕ್ಕಾಗಿ ಹಿಂದೂ ಮಹಿಳೆಗೆ ಕಿರುಕುಳ ನೀಡಿದ ಕ್ರೈಸ್ತ ಧರ್ಮ ಪ್ರಚಾರಕರು!

ಕ್ರೈಸ್ತರಿಂದ ಮಹಿಳೆಯ ಅಪ್ರಾಪ್ತ ಮಗಳಿಗೆ ಲೈಂಗಿಕ ಶೋಷಣೆ !

ರಾಜ್ಯದಲ್ಲಿ ಜಾರ್ಖಂಡ ಮುಕ್ತಿ ಮೋರ್ಚಾದ ಕ್ರೈಸ್ತ ಓಲೈಕೆಯ ಸರಕಾರ ಇರುವುದರಿಂದ ಅಲ್ಲಿ ಬೇರೆ ಇನ್ನೇನಾಗಲು ಸಾಧ್ಯ ? ಕಾನೂನಿನ ಭಯ ಇಲ್ಲದಿರುವ ಕ್ರೈಸ್ತ ಧರ್ಮಪ್ರಚಾರಕರನ್ನು ತಡೆಯಲು ಇನ್ನು ಕೇಂದ್ರ ಸರಕಾರವೇ ಕ್ರಮ ಕೈಗೊಳ್ಳಬೇಕು ! – ಸಂಪಾದಕರು

ರಾಂಚಿ (ಜಾರ್ಖಂಡ) – ಗುಮಲಾ ಜಿಲ್ಲೆಯ ಜಾಮಡಿಹದಲ್ಲಿ ಕ್ರೈಸ್ತ ಪ್ರಚಾರಕರು ಮತಾಂತರಕ್ಕಾಗಿ ಒರ್ವ ಹಿಂದೂ ಮಹಿಳೆಗೆ ತುಂಬಾ ಕಿರುಕುಳ ನೀಡಿದರು ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆಯೂ ಲೈಂಗಿಕ ಶೋಷಣೆ ನೀಡಿದರು. ಈ ಪ್ರಕರಣದಲ್ಲಿ ಸಂತ್ರಸ್ತೆಯು ಆತನ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

ಸಂತ್ರಸ್ತ ಮಹಿಳೆ ಆರೋಗ್ಯ ಕಾರ್ಯಕರ್ತೆ ಆಗಿದ್ದಾರೆ. ಆಕೆ, ‘ಕ್ರೈಸ್ತ ಧರ್ಮ ಪ್ರಚಾರಕರು ನನ್ನ ಮನೆಗೆ ಬಂದು ನನ್ನನ್ನು ಕ್ರೈಸ್ತ ಪಂಥ ಸ್ವೀಕರಿಸಲು ಹೇಳಿದರು. ಆವಾಗ ನಾನು ಅವರಿಗೆ ‘ನಾವು ಹಿಂದೂ ಧರ್ಮದಲ್ಲಿ ಆನಂದವಾಗಿದ್ದೇವೆ’, ಎಂದು ಉತ್ತರಿಸಿದೆ ಮತ್ತು ಮತಾಂತರವಾಗಲು ನಿರಾಕರಿಸಿದೆ. ಆದ್ದರಿಂದ ಕ್ರೈಸ್ತ ಧರ್ಮ ಪ್ರಚಾರಕರು ಕೋಪಗೊಂಡು ಅವರು ನನ್ನ ೧೬ ವರ್ಷದ ಮಗಳ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದರು ಮತ್ತು ಹೇಳಿದರು, ‘ನಾವು ಆಕೆಯೊಂದಿಗೆ ಮದುವೆಯಾಗಿ ಆಕೆಯನ್ನು ಕ್ರೈಸ್ತರನ್ನಾಗಿ ಮಾಡುವೆವು.’ ಈ ಪ್ರಕರಣದಲ್ಲಿ ಸಂತ್ರಸ್ತೆಯು ಪಾಲಿನಾ ಬಿಲುಂಗ್, ಆಕಾಶ ಡುಂಗಡುಂಗ, ನಿಶಾ, ಶೀಲಾ, ಫುಲಮನಿ ಸೂರಿನ, ಊರ್ಮಿಳಾ, ಸಂತೋಷಿ, ಜಾನಕಿ, ಶೀತಲ ರಾಮ, ಗಂಗಿದೇವಿ, ಮತ್ತು ಸುಶೀಲಾದೇವಿ ಇವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಇವರೆಲ್ಲರೂ ಮತಾಂತರಗೊಂಡಿರುವ ಕ್ರೈಸ್ತರಾಗಿದ್ದಾರೆ. (ಮತಾಂತರವಾಗಿರುವ ಕ್ರೈಸ್ತರು ತಮ್ಮ ಹಿಂದೂ ಹೆಸರುಗಳನ್ನು ಬದಲಾಯಿಸದೆ ಇತರ ಹಿಂದೂಗಳ ದಾರಿ ತಪ್ಪಿಸುತ್ತಾರೆ ಮತ್ತು ಅವರನ್ನು ಮತಾಂತರಿಸುತ್ತಾರೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು) ಕುರುಕುರಾ ಪೊಲೀಸ್ ಠಾಣೆಯ ಹೆಚ್ಚುವರಿ ಅಧಿಕಾರಿ ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಗುಮಲಾ ಮತಾಂತರ ಕೇಂದ್ರವಾಗಿ ಬಿಟ್ಟಿದೆ. ಪ್ರಸಾರ ಮಾಧ್ಯಮದಲ್ಲಿ ಕೊಟ್ಟಿರುವ ವರದಿಯ ಪ್ರಕಾರ ಸಂಚಾರ ನಿಷೇಧದ ಕಾಲದಲ್ಲಿ ಕ್ರೈಸ್ತ ಧರ್ಮ ಪ್ರಚಾರಕರು ಇಲ್ಲಿ ದೊಡ್ಡಪ್ರಮಾಣದಲ್ಲಿ ಜನರನ್ನು ಮತಾಂತರಿಸಿದ್ದಾರೆ.