‘ಅಖಿಲ ಭಾರತ ಗ್ರಾಹಕ ಪರಿಷತ್ತು’ ಇದರ ವತಿಯಿಂದ ರಾಷ್ಟ್ರಧ್ವಜವನ್ನು ಗೌರವಿಸುವ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

ಬೆಂಗಳೂರು – ‘ಅಖಿಲ ಭಾರತ ಗ್ರಾಹಕರ ಪಂಚಾಯತಿ’ ಇದರ ವತಿಯಿಂದ ಸ್ವಾತಂತ್ರ್ಯ ದಿನದ ಹಿಂದಿನ ದಿನ ಸಂಜೆ ‘ರಾಷ್ಟ್ರ ಧ್ವಜದ ಗೌರವ ಕಾಪಾಡಿ !’ ಎಂಬ ಕುರಿತು ಒಂದು ವಿಶೇಷ ವೆಬಿನಾರ್(ಆನ್‌ಲೈನ್ ಚರ್ಚಾಕೂಟ)ವನ್ನು ಆಯೋಜಿಸಲಾಗಿತ್ತು. ಈ ವೆಬಿನಾರ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಮತ್ತು ಅಖಿಲ ಭಾರತ ಗ್ರಾಹಕ ಪಂಚಾಯತಿಯ ಅಧ್ಯಕ್ಷ ಎ.ವಿ.ಬಾಗುರಜಿ ಮಾತನಾಡಿದರು. ಈ ಸಮಯದಲ್ಲಿ ಶ್ರೀ. ಗೌಡ ಇವರು ‘ಸ್ವಾತಂತ್ರ್ಯ ಮತ್ತು ಸುರಾಜ್ಯ (ಹಿಂದೂ ರಾಷ್ಟ್ರ)’ ಈ ಕುರಿತು ಮಾಹಿತಿ ನೀಡಿದರು. ಶ್ರೀ ಬಾಗುರಜಿ ಇವರು ‘ರಾಷ್ಟ್ರ ಧ್ವಜದ ಗೌರವವನ್ನು ಹೇಗೆ Uಸಂರಕ್ಷಿಸಬಹುದು ?’, ಎಂಬ ಕುರಿತು ಮಾರ್ಗದರ್ಶನ ಮಾಡಿದರು. ಅನೇಕ ಗ್ರಾಹಕರು ಮತ್ತು ದೇಶಭಕ್ತ ಕಾರ್ಯಕರ್ತರು ಇದರ ಲಾಭವನ್ನು ಪಡೆದುಕೊಂಡರು.