ಜಮಶೇದಪುರದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ !

ಜಮಶೇದಪೂರ (ಝಾರಖಂಡ)- ಇಲ್ಲಿನ ಬಿರಸಾನಗರದ ಭಾಗದಲ್ಲಿರುವ ಶ್ರೀ ಹನುಮಾನ ದೇವಾಲಯದ ವತಿಯಿಂದ ದೇವಾಲಯದ ಪರಿಸರದಲ್ಲಿ ಇತ್ತೀಚೆಗಷ್ಟೇ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದರಲ್ಲಿ ಸನಾತನ ಸಂಸ್ಥೆಯ ಶ್ರೀ. ಸುದಾಮಾ ಶರ್ಮಾ ಹಾಗೂ ಶ್ರೀ. ಬಿ. ಭೀ. ಕೃಷ್ಣಾರವರು ಗಿಡಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಗಿಡಗಳಿಗೆ ಹೂವು-ಹಣ್ಣು ನೀಡುವ ಭೂಮಾತೆಗೆ ಭಾವಪೂರ್ಣವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನರು ಕೊರೋನಾದ ನಿಯಮಗಳನ್ನು ಪಾಲಿಸುತ್ತಾ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮಕ್ಕಾಗಿ ದೇವಾಲಯದ ಪ್ರಮುಖ ಕಾರ್ಯಕರ್ತರಾದ ಶ್ರೀ. ರಾಜನ ಗೊರಾಈಯವರು ಸನಾತನ ಸಂಸ್ಥೆಗೆ ಆಮಂತ್ರಣ ನೀಡಿದ್ದರು. ಶ್ರೀ. ಗೊರೋಈಯವರು ಸನಾತನ ಸಂಸ್ಥೆಯ ಸಾಧಕರ ಪ್ರಶಂಸೆ ಮಾಡುವಾಗ ‘ಗಿಡ ನೆಡುವಂತಹ ಮಹಾನ್ ಕಾರ್ಯವನ್ನು ಇತರ ಗೌರವಾನ್ವಿತ ಜನರು ಮಾಡುವುದಕ್ಕಿಂತ ಸನಾತನದ ಸಾಧಕರಿಂದಲೇ ಅದು ಆಗಬೇಕು’ ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು.