ಭಾರತದಲ್ಲಿನ ಕೊರೊನಾ ಬಿಕ್ಕಟ್ಟು ದೂರವಾಗಲು ಇಸ್ರೇಲ್‌ನಲ್ಲಿ ಯಹೂದಿಗಳಿಂದ ಪ್ರಾರ್ಥನೆ ಮತ್ತು ‘ಓಂ ನಮಃ ಶಿವಾಯ’ದ ಜಪ !

ಸ್ಥೂಲರೂಪದಲ್ಲಿ ಅನೇಕ ಜನರು ಯಾವಾಗಲೂ ಸಹಾಯ ಮಾಡುತ್ತಿದ್ದಾರೆ; ಆದರೆ ಇಸ್ರೇಲ್‌ನ ಜ್ಯೂ ಧರ್ಮಿಯರಿಂದ ಈ ರೀತಿಯ ಜಪ ಮತ್ತು ಪ್ರಾರ್ಥಿಸುವ ಮೂಲಕ ಮಾಡುವ ಸಹಾಯ ಅಮೂಲ್ಯವಾದುದು ! ಆದ್ದರಿಂದ ಅವರು ಭಾರತೀಯರ ಮತ್ತು ಹಿಂದೂಗಳ ನಿಜವಾದ ಸ್ನೇಹಿತರಾಗಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ !

ನವ ದೆಹಲಿ – ಭಾರತದ ಹೆಚ್ಚುತ್ತಿರುವ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಿಂದ ಸಹಾಯ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಭಾರತದಲ್ಲಿನ ಬಿಕ್ಕಟ್ಟು ದೂರವಾಗಲು ನೂರಾರು ಸಂಖ್ಯೆಯ ಯಹೂದಿ ನಾಗರಿಕರು ಒಟ್ಟಾಗಿ ಸೇರಿ ‘ಓಂ ನಮಃ ಶಿವಾಯ’ ಜಪ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಇಸ್ರೇಲ್‌ನಲ್ಲಿ ಭಾರತದ ರಾಜಕೀಯ ಅಧಿಕಾರಿ ಪವನ ಪಾಲ ಪೋಸ್ಟ್ ಮಾಡಿದ್ದಾರೆ.

(ಸೌಜನ್ಯ : Capital TV)