ಚಬಡಾ (ರಾಜಸ್ಥಾನ)ದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮತಾಂಧರಿಂದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೆಯೂ ದಾಳಿ

ಕಾಂಗ್ರೆಸ್ ರಾಜ್ಯದಲ್ಲಿ, ಮತಾಂಧರು ಹೆಚ್ಚು ಕೊಬ್ಬುತ್ತಾರೆ ಮತ್ತು ಅವರು ಯಾವುದೇ ಕಾರಣಕ್ಕೂ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ ಎಂದು ಪದೇ ಪದೇ ಕಂಡುಬರುತ್ತದೆ. ಇದಕ್ಕಾಗಿ ದೇಶವನ್ನು ಕಾಂಗ್ರೆಸ್ ನಿಂದ ಮುಕ್ತಗೊಳಿಸುವುದು ಅನಿವಾರ್ಯ !

ಬಾರಾಂ (ರಾಜಸ್ಥಾನ) – ಇಲ್ಲಿನ ಚಬಡಾ ಪ್ರದೇಶದ ಧರನಾವದಾ ಚೌಕ್‍ನಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮತಾಂಧರು ಹಿಂಸಾಚಾರವನ್ನು ನಡೆಸಿದ್ದಾರೆ. ಇದರಲ್ಲಿ ಅನೇಕ ಅಂಗಡಿಗಳನ್ನು ಸುಡುವುದರೊಂದಿಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ, ಪರಿಣಾಮವಾಗಿ ಪೊಲೀಸರು ಲಾಠಿಚಾರ್ಜ ಮಾಡಿದರು, ಅದೇರೀತಿ ಸೆಕ್ಷನ್ ೧೪೪ ಜಾರಿಗೊಳಿಸಿದರು. ಇಲ್ಲಿ ವಿದ್ಯುತ್ ಸರಬರಾಜು ಕೂಡ ಸ್ಥಗಿತಗೊಳಿಸಲಾಗಿದೆ.

ಇಲ್ಲಿ, ಏಪ್ರಿಲ್ ೧೧ ರಂದು, ಕಮಲ್ ಸಿಂಹ ಇವರು ಗಾಡಿಯಲ್ಲಿ ಹಣ್ಣುಗಳನ್ನು ಖರೀದಿಸುತ್ತಿದ್ದಾಗ, ಫರೀದ್, ಅಬಿದ್ ಮತ್ತು ಸಮೀರ್ ನಡುವೆ ವಾಗ್ವಾದ ನಡೆಯಿತು. ಇದರಿಂದ ಮತಾಂಧರು ಕಮಲ ಸಿಂಹ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಅವರನ್ನು ರಕ್ಷಿಸಲು ಹೋದ ಅಂಗಡಿಯ ರಾಕೇಶ ನಾಗರನ ಮೇಲೆಯೂ ಮತಾಂಧರು ಆಕ್ರಮಣ ಮಾಡಿದರು. ಇದರ ನಂತರ ಹಿಂಸಾಚಾರ ನಡೆಯಿತು. ದಾಳಿಯಲ್ಲಿ ಗಾಯಗೊಂಡಿದ್ದ ಸಿಂಗ್ ಮತ್ತು ನಾಗರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ.