ಪೊಲೀಸರಿಂದ ದೂರು ನೊಂದಾಯಿಸಿಕೊಳ್ಳಲು ನಕಾರ !
ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಜಗತ್ತಿನಲ್ಲಿ ಎಲ್ಲಿಯಾದರೂ ಜ್ಯೂಗಳ ವಿರುದ್ಧ ಘಟನೆ ನಡೆದರೆ, ಇಸ್ರೇಲ್ ಅವರ ಹಿಂದೆ ದೃಡವಾಗಿ ನಿಲ್ಲುತ್ತದೆ; ಆದರೆ ಹಿಂದೂಗಳ ಹಿಂದೆ ಯಾರೂ ನಿಲ್ಲುವುದಿಲ್ಲ, ಅದು ಖೇದಕರವಾಗಿದೆ ! ಭಾರತ ಸರಕಾರವು ಎಂದಾದರೂ ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಸಹಾಯ ಮಾಡಲು ಯಾವಾಗ ಕ್ರಮ ಕೈಕೊಳ್ಳುವುದು ?
ಹೈದರಾಬಾದ (ಪಾಕಿಸ್ತಾನ) – ಇಲ್ಲಿಯ ೧೩ ವರ್ಷದ ಹಿಂದೂ ಬಾಲಕಿಯನ್ನು ಮತಾಂಧರು ಅಪಹರಿಸಿ ಮತಾಂತರಗೊಳಿಸಿದ್ದಾರೆ. ಈ ಮಾಹಿತಿಯನ್ನು ‘ಹಿಂದೂ ಮೆಂಬರ ನ್ಯಾಶನಲ್ ಅಸೆಂಬ್ಲಿಯ’ ರಮೇಶಕುಮಾರ ವಂಖವಾನಿ ನೀಡಿದ್ದಾರೆ. ಈ ಬಾಲಕಿಯ ತಂದೆಯು ಆಕೆಯ ಅಪಹರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗ ಪೊಲೀಸರು ಅವರನ್ನು ಓಡಿಸಿದರು. ಅನಂತರ ತಂದೆಯು ಹಿಂದೂ ನಾಯಕರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ದಾಖಲಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ೩ ಹಿಂದೂ ಹುಡುಗಿಯರನ್ನು ಅಪಹರಿಸಲಾಗಿದೆ.