ಬಾಂಗ್ಲಾದೇಶದಲ್ಲಿ ಮತಾಂಧರು ಕಾಳಿ ದೇವಿಯ ದೇವಾಲಯದ ಮೇಲೆ ದಾಳಿ ಮಾಡಿ ದೇವಿಯ ವಿಗ್ರಹವನ್ನು ಸುಟ್ಟುಹಾಕಿದರು !

ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು ಮತ್ತು ಅವರ ದೇವಾಲಯಗಳು ! ಭಾರತದ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ಅಮೇರಿಕಾ ಮತ್ತು ಇತರ ದೇಶಗಳು ಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಅಲ್ಲಿ ಹಿಂದೂಗಳ ಮೇಲೆ ಇನ್ನೂ ಎಷ್ಟು ದೌರ್ಜನ್ಯಗಳು ನಡೆದ ಮೇಲೆ ಭಾರತ ಸರಕಾರ ಕ್ರಮ ಕೈಗೊಳ್ಳಲಿದೆ ?

ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶದಿಂದ ಹಾಕಿರದೇ ಮಾಹಿತಿಗಾಗಿ ಪ್ರಕಟಿಸಲಾಗಿದೆ – ಸಂಪಾದಕ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ರಾಣಿ ಸಂಕಿಲ್ ಉಪ ಜಿಲ್ಲೆಯ ಉತ್ತರಗಾವ ಗ್ರಾಮದಲ್ಲಿ ಮತಾಂಧರು ಕಾಲಿಮತಾ ದೇವಿಯ ದೇವಾಲಯದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ದೇವಾಲಯದಲ್ಲಿದ್ದ ಕಾಳಿ ದೇವಿಯ ವಿಗ್ರಹವನ್ನೂ ಸುಟ್ಟುಹಾಕಲಾಗಿದೆ ಎಂದು ರಾಣಿಸಂಕಿಲ್ ಪೊಲೀಸ ಠಾಣೆಯ ಅಧಿಕಾರಿ ಜಾಹಿದ್ ಇಕ್ಬಾಲ್ ಮಾಹಿತಿ ನೀಡಿದ್ದಾರೆ.