ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಬಾಂಬ್ ಸ್ಫೋಟದ ಹಿಂದೆ ಇರಾನ್ ಕೈವಾಡ !

ಸ್ಫೋಟಕ್ಕಾಗಿ ಸ್ಥಳೀಯ ಭಾರತೀಯರ ಬಳಕೆ !

* ನಿನ್ನೆ ತನಕ, ಪಾಕಿಸ್ತಾನಕ್ಕಾಗಿ ದೇಶದ್ರೋಹದ ಕೃತ್ಯಗಳನ್ನು ನಡೆಸುತ್ತಿದ್ದವರು ಈಗ ಇರಾನ್‍ಗೋಸ್ಕರವೂ ದೇಶದ್ರೋಹದ ಕೃತ್ಯಗಳನ್ನು ನಡೆಸುತ್ತಿದ್ದಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

* ಪಾಕಿಸ್ತಾನದ ಜೊತೆಗೆ, ಇರಾನ್ ಕೂಡ ಈಗ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಸುಲಭವಾಗಿ ನಡೆಸಬಲ್ಲದು, ಇದು ಭಾರತದ ಗುಪ್ತಚರ ಮತ್ತು ಭದ್ರತಾ ಪಡೆಗಳಿಗೆ ನಾಚಿಕೆಯ ವಿಷಯವಾಗಿದೆ ! ಇಂತಹ ಭದ್ರತಾ ವ್ಯವಸ್ಥೆಯು ಭಾರತೀಯರನ್ನು ರಕ್ಷಿಸಬಹುದೇ ?

ನವದೆಹಲಿ : ಜನವರಿ ಅಂತ್ಯದಲ್ಲಿ ನವದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟವನ್ನು ಇರಾನ್ ಮಾಡಿಸಿರುವುದಾಗಿ ಬೆಳಕಿಗೆ ಬಂದಿದೆ. ಇದಕ್ಕಾಗಿ ಸ್ಥಳೀಯ ಜನರ ಸಹಾಯವನ್ನು ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಎನ್.ಐ.ಎ. ಮತ್ತು ಇಸ್ರೇಲ್‍ನ ಗೂಡಾಚಾರ ಸಂಸ್ಥೆ ಮೊಸಾದ್ ನಡೆಸಿದ ತನಿಖೆಯಿಂದ ಈ ಮಾಹಿತಿ ಬಂದಿದೆ.