ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾದಾಕ್ಷಣ ಪೀಡಿತೆಗೆ ಬೆಂಕಿ ಹಚ್ಚಿದ ಆರೋಪಿ

  • ಪ್ರಕರಣಗಳ ವಿಲೇವಾರಿ ತುರ್ತಾಗಿ ನಡೆದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ಕಾರಣ ಇಂತಹ ಘಟನೆಗಳು ನಡೆಯುತ್ತಲೇ ಇರುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ
  • ಕಾಂಗ್ರೆಸ್ ರಾಜ್ಯದಲ್ಲಿ ಹದಗೆಟ್ಟ ಕಾನೂನು ವ್ಯವಸ್ಥೆ !

ಹನುಮಾನಗಡ (ರಾಜಸ್ಥಾನ) – ಅತ್ಯಾಚಾರದ ಆರೋಪದ ಮೇಲೆ ಬಂಧಿಸಲ್ಪಟ್ಟ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆತನು ಪೀಡಿತೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದನು. ಇದರಲ್ಲಿ ಪೀಡಿತೆಯು ಶೇಕಡಾ ೯೦ ರಷ್ಟು ಸುಟ್ಟುಹೋಗಿದ್ದಾಳೆ. ಆಕೆಯನ್ನು ಬಿಕಾನೇರ್‌ನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.