
ನವ ದೆಹಲಿ: ‘ದೇಶದ ರಾಷ್ಟ್ರಧ್ವಜವು ಕೇವಲ ಪ್ರಧಾನಮಂತ್ರಿಯವರಿಗೆ ಮಾತ್ರ ಸೀಮಿತವಾಗಿದೆಯೇ? ಇಡೀ ದೇಶಕ್ಕೆ ರಾಷ್ಟ್ರಧ್ವಜದ ಮೇಲೆ ಪ್ರೀತಿಯಿದೆ. ಹಾಗಾಗಿ ದೇಶದ ಧ್ವಜವನ್ನು ಅವಮಾನಿಸಿದ ವ್ಯಕ್ತಿಯನ್ನು ಬಂಧಿಸಿ’ ಎಂದು ರೈತ ಮುಖಂಡ ರಾಕೇಶ್ ಟಿಕೈತ್ ಇವರು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಯಿಸಿದ್ದಾರೆ. ಟ್ರಾಕ್ಟರ್ ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಅವಮಾನಿಸಲಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು.
ಹೊಸ ಕೃಷಿ ಕಾನೂನುಗಳ ಕುರಿತು ಸರಕಾರ ಮತ್ತು ರೈತರ ನಡುವೆ ಚರ್ಚೆಗಳು ಪುನರಾರಂಭವಾಗುತ್ತದೆಯೇ ಎಂಬ ಪ್ರಶ್ನೆಗೆ ರಾಕೇಶ್ ಟಿಕೈತ್ ಇವರು, “ನಾವು ಪ್ರಧಾನಿ ನರೇಂದ್ರ ಮೋದಿಯವರನ್ನು ಗೌರವಿಸುತ್ತೇವೆ” ಎಂದು ಹೇಳಿದರು. ‘ರೈತರ ಸಮಸ್ಯೆಗಳಿಗೆ ನಾವು ಅವರಿಂದ ಪರಿಹಾರವನ್ನು ನಿರೀಕ್ಷಿಸುತ್ತೇವೆ; ಆದರೆ ನಮ್ಮ ಮೇಲೆ ಒತ್ತಡದ ರಾಜಕೀಯ ಮಾಡಿದರೆ ನಾವು ಚರ್ಚೆಗೆ ಸಿದ್ಧರಿಲ್ಲ. ಬಂದೂಕುಗಳ ಭಯವನ್ನು ತೋರಿಸಿ ಚರ್ಚೆಯಾಗಲು ಸಾಧ್ಯವಿಲ್ಲ. ಯಾವುದೇ ಷರತ್ತುಗಳನ್ನಿಡದೇ ಮಾತುಕತೆ ನಡೆಸುವ ಸಿದ್ಧತೆಯನ್ನು ಸರಕಾರವು ಇಟ್ಟುಕೊಂಡಿರಬೇಕು’ ಎಂದಿದ್ದಾರೆ.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!