ಕೇಂದ್ರ ಆಯುಷ ಸಚಿವ ಶ್ರೀಪಾದ್ ನಾಯಕ್ ಅವರ ವಾಹನದ ಭೀಕರ ಅಪಘಾತ

ಪತ್ನಿ ಮತ್ತು ಆಪ್ತ ಕಾರ್ಯದರ್ಶಿ ಸಾವು

ಪಣಜಿ – ಕೇಂದ್ರ ಆಯುಷ್ ಸಚಿವ (ಸ್ವತಂತ್ರ ಉಸ್ತುವಾರಿ) ಶ್ರೀಪಾದ್ ನಾಯಕ್ ಅವರ ವಾಹನವು ಕರ್ನಾಟಕದ ಅಂಕೋಲಾದಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು, ಅವರ ಪತ್ನಿ ಮತ್ತು ಆಪ್ತ ಕಾರ್ಯದರ್ಶಿ ಸಾವನ್ನಪ್ಪಿದ್ದರೆ, ಶ್ರೀಪಾದ್ ನಾಯಕ್ ಇವರ ಸ್ಥಿರಿ ಗಂಭೀರವಾಗಿದೆ.

ಶ್ರೀಪಾದ ನಾಯಕ್ ಇವರಿಗೆ ತಕ್ಷಣವೇ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ತಿಳಿಸಿದ್ದಾರೆ. ಶ್ರೀಪಾದ್ ನಾಯಕ್ ರವರನ್ನು ಗೋವಾ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ. ‘ಆಯುಷ್ ಸಚಿವ ಶ್ರೀಪಾದ ನಾಯಕ್ ಇವರು ಶೀಘ್ರ ಗುಣಮುಖರಾಗಲಿ’, ಎಂದು ಈಶ್ವರನಲ್ಲಿ ಪ್ರಾರ್ಥನೆ ಮತ್ತು ಪತ್ನಿಯ ಸಾವಿನ ದುಃಖದಲ್ಲಿ ಸನಾತನ ಪರಿವಾರ ಸಹಭಾಗಿಯಾಗಿದೆ.