೨ ಹಿಂದೂಗಳಿಗೆ ಗಂಭೀರ ಗಾಯ
|
ಅಂಬೇಡಕರನಗರ (ಉತ್ತರ ಪ್ರದೇಶ) – ಇಲ್ಲಿ ನವೆಂಬರ್ ೧೫ ರಂದು ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪಂಹಿತಿಪುರ ಬಜಾರನಲ್ಲಿ ಶ್ರೀ ಲಕ್ಷ್ಮೀ ಮತ್ತು ಶ್ರೀ ಗಣಪತಿಯ ವಿಗ್ರಹಗಳ ವಿಸರ್ಜನೆಯ ಮೆರವಣಿಗೆಯ ಮೇಲೆ ಮಸೀದಿಯ ಮುಂದೆ ಡಿಜೆ ಹಾಕಲಾಗಿದೆ ಎಂದು ಹೇಳುತ್ತಾ ಮತಾಂಧರು ಕಲ್ಲುತೂರಾಟ ಮಾಡಿದರು. ಮನೆಗಳ ಛಾವಣಿಗಳಿಂದ ಕಲ್ಲುತೂರಾಟ ಮಾಡಲಾಯಿತು. ಅದೇರೀತಿ ಹಿಂದೂಗಳ ಮೇಲೆ ಕೋಲು ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಯಿತು. ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ೧೦ ರಿಂದ ೧೨ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜುಬೈರ್, ಶೆರು, ಶಹಜಾದೆ, ಶಾದಾನ ಖಾನ್, ಫಾಹೀಮ್, ಶಬ್ಬರ್, ಜೀಶಾನ ಖಾನ್ ಮತ್ತು ಇತರ ೮ ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಒಟ್ಟು ೧೧ ಜನರನ್ನು ಬಂಧಿಸಿದ್ದಾರೆ. ಪೊಲೀಸರು ಇಲ್ಲಿ ಬಿಗಿಬಂದೋಬಸ್ತು ಮಾಡಿದ್ದಾರೆ.