ಮುಂಶಿಗಂಜ್ ಜಿಲ್ಲೆಯಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿ ಧ್ವಂಸ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

  • ಬಾಂಗ್ಲಾದೇಶವಾಗಲಿ, ಭಾರತವಾಗಲಿ, ಮತಾಂಧರು ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಾಗಲಿ ಅವರು ಹಿಂದೂಗಳ ಮೇಲೆ ಮತ್ತು ಅವರ ಶ್ರದ್ಧಾಸ್ಥಾನಗಳ ಮೇಲೆ ದಾಳಿ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಈ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಎಲ್ಲೆಡೆ ಹಿಂದೂಗಳು ಒಂದಾಗುವುದು ಮತ್ತು ಹಿಂದೂ ರಾಷ್ಟ್ರ ಸ್ಥಾಪಿಸುವುದು ಅನಿವಾರ್ಯವಾಗಿದೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮುಂಶಿಗಂಜ್ ಜಿಲ್ಲೆಯ ಸಿರಜ್ದಿಖಾನ್ ಉಪ ಜಿಲ್ಲೆಯಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದಲ್ಲಿ ಶ್ರೀ ದುರ್ಗಾ ದೇವಿ, ಶ್ರೀ ಸರಸ್ವತಿ ಮತ್ತು ಶ್ರೀ ಕಾರ್ತಿಕೇಯರ ವಿಗ್ರಹಗಳನ್ನು ಮತಾಂಧರು ಧ್ವಂಸಗೊಳಿಸಿದರು. ದೇವಾಲಯದ ಮೇಲೆ ದಾಳಿ ಮಾಡಿದ ಮತಾಂಧರನ್ನು ಇನ್ನೂ ಗುರುತಿಸಲಾಗಿಲ್ಲ; ಆದರೆ, ತನಿಖೆ ನಡೆಯುತ್ತಿದೆ ಎಂದು ಸಿರಾಜ್ದಿಖಾನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮೊಹಮ್ಮದ್ ರಿಜೌಲ್ ಹಕ್ ಇವರು ಹೇಳಿದ್ದಾರೆ.
ದೇವಾಲಯದ ಆವರಣ ತೆರೆದಿರುವುದರಿಂದ ಅಲ್ಲಿ ಬೇಲಿ ಹಾಕಲು ಸ್ಥಳೀಯ ಆಡಳಿತ ಮತ್ತು ಪೊಲೀಸರು ಸ್ವಲ್ಪ ಹಣವನ್ನು ದಾನದ ರೂಪದಲ್ಲಿ ನೀಡಿದ್ದಾರೆ.